Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ದಾಳಿಗೆ ತತ್ತರಿಸಿದ ರೈಲ್ವೇಸ್

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ದಾಳಿಗೆ ತತ್ತರಿಸಿದ ರೈಲ್ವೇಸ್
ನವದೆಹಲಿ , ಮಂಗಳವಾರ, 28 ಜನವರಿ 2020 (09:23 IST)
ನವದೆಹಲಿ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ಉತ್ತಮ ದಾಳಿ ಸಂಘಟಿಸಿದ್ದು, ಮೊದಲ ದಿನವೇ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.


ಮೊದಲ ದಿನದಂತ್ಯಕ್ಕೆ ರೈಲ್ವೇಸ್ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಘಾತಕ ದಾಳಿ ಸಂಘಟಿಸಿದ ಪ್ರತೀಕ್ ಜೈನ್ ನಾಲ್ಕು ವಿಕೆಟ್ ಕಬಳಿಸಿ ರೈಲ್ವೇಸ್ ಹಳಿ ತಪ್ಪಿಸಿದರು. ಅನುಭವಿ ಅಭಿಮನ್ಯು ಮಿಥುನ್ 2 ವಿಕೆಟ್ ಕಬಳಿಸಿದ್ದಾರೆ.

ರೈಲ್ವೇಸ್ ಪರ ಹೋರಾಟ ನಡೆಸುತ್ತಿರುವ ಅರಿಂಧಮ್ ಘೋಷ್ 32 ರನ್ ಮತ್ತು ಅವಿನಾಶ್ ಯಾದವ್ 29 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂದು ಬೇಗನೇ ರೈಲ್ವೇಸ್ ಆಲೌಟ್ ಮಾಡಿದಲ್ಲಿ ರಾಜ್ಯಕ್ಕೆ ಗೆಲುವು ಸುಲಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಆಟಗಾರನ ಭವಿಷ್ಯವನ್ನೇ ಬದಲಾಯಿಸಿದ್ದ ವಿರಾಟ್ ಕೊಹ್ಲಿ