Select Your Language

Notifications

webdunia
webdunia
webdunia
webdunia

ರಣಜಿ ಕ್ರಿಕೆಟ್ ಪಂದ್ಯ: ಒಡಿಶಾ ವಿರುದ್ಧ ಕರ್ನಾಟಕದ ಬಿಗುವಿನ ದಾಳಿ

ರಣಜಿ ಕ್ರಿಕೆಟ್ ಪಂದ್ಯ: ಒಡಿಶಾ ವಿರುದ್ಧ ಕರ್ನಾಟಕದ ಬಿಗುವಿನ ದಾಳಿ
Delhi , ಮಂಗಳವಾರ, 22 ನವೆಂಬರ್ 2016 (12:28 IST)
ದೆಹಲಿ: ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಇನಿಂಗ್ಸ್ ನಲ್ಲಿ ಕಡಿಮೆ ಮೊತ್ತ ಗಳಿಸಿದ್ದ ಕರ್ನಾಟಕ ಬೌಲಿಂಗ್ ನಲ್ಲಿ ಉತ್ತಮ ದಾಳಿ ಸಂಘಟಿಸಿದೆ. ಕರ್ನಾಟಕದ 179 ರನ್ ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಒಡಿಶಾ ಊಟದ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ.

ಇದರೊಂದಿಗೆ ಒಡಿಶಾ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತದಿಂದ 54 ರನ್ ಹಿನ್ನಡೆಯಲ್ಲಿದೆ. ರಾಜ್ಯದ ಪರ ಎಸ್. ಗೋಪಾಲ್ 2 ವಿಕೆಟ್, ಎಸ್.ಅರವಿಂದ್ ಮತ್ತು ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದುಕೊಂಡರು.  ಒಡಿಶಾ ನಾಯಕ ಗೋವಿಂದ್ ಪೊದಾರ್ 44 ರನ್ ಗಳಿಸಿ ಔಟಾಗಿದ್ದಾರೆ.

ಕರ್ನಾಟಕದ ಅಭಿಮನ್ಯು ಮಿಥುನ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ನಾಯಕ ವಿನಯ್ ಕುಮಾರ್ 10 ಓವರ್ ಬೌಲಿಂಗ್ ಮಾಡಿದ್ದು, ಅಷ್ಟೊಂದು ಪರಿಣಾಮ ಬೀರಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸೌರವ್ ಗಂಗೂಲಿ ಮೇಲೆ ಕಿಡಿ ಕಾರಿದ ರವಿ ಶಾಸ್ತ್ರಿ