Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ: ಕರ್ನಾಟಕಕ್ಕೆ ಆರಂಭಿಕ ಆಘಾತ

ರಣಜಿ ಟ್ರೋಫಿ: ಕರ್ನಾಟಕಕ್ಕೆ ಆರಂಭಿಕ ಆಘಾತ
Mumbai , ಶುಕ್ರವಾರ, 28 ಅಕ್ಟೋಬರ್ 2016 (12:39 IST)
ಮುಂಬೈ: ಅಸ್ಸಾಂ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಇದಕ್ಕೂ ಮೊದಲು ಅಸ್ಸಾಂ ತಂಡ ಮೊದಲ ಇನಿಂಗ್ಸ್ ನಲ್ಲಿ 325 ಕ್ಕೆ ಆಲೌಟ್ ಆಯಿತು. ನಿನ್ನೆ ಶತಕ ಗಳಿಸಿ ಅಜೇಯರಾಗಿ ಉಳಿದ ಅಮಿತ್ ವರ್ಮಾ ಇಂದು ತಮ್ಮ ಮೊತ್ತವನ್ನು 166 ಕ್ಕೇರಿಸಿ ಅಂತ್ಯದವರೆಗೂ ಅಜೇಯರಾಗಿ ಉಳಿದರು.  ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ಕಳೆದುಕೊಂಡು ಕೇವಲ 46 ರನ್ ಗಳಿಸಿದೆ.

ರಾಬಿನ್ ಉತ್ತಪ್ಪ(16) ಮತ್ತು ನಾಯಕ ಕರಣ್ ನಾಯರ್ (25) ಸದ್ಯ ಕ್ರೀಸ್ ನಲ್ಲಿದ್ದಾರೆ.   ಆರಂಬಿಕರಾದ  ಮಯಾಂಕ್ ಅಗರ್ವಾಲ್ ಮತ್ತು ಆರ್. ಸಮರ್ಥ್  ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅಸ್ಸಾಂ ಪರ ಅರೂಪ್ ದಾಸ್ ಮತ್ತು ಕೃಷ್ಣ ದಾಸ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.

ಇದಕ್ಕೂ ಮೊದಲು ಕರ್ನಾಟಕದ  ಪರ ಎಸ್ ಅರವಿಂದ್ 5 ವಿಕೆಟ್, ಶ್ರೇಯಾಸ್ ಗೋಪಾಲ್ 3 ಹಾಗೂ ಸ್ಟುವರ್ಟ್ ಬಿನ್ನಿ 2 ವಿಕೆಟ್ ಕಿತ್ತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಟೀಂ ಇಂಡಿಯಾಗೆ ಫೈನಲ್ ಮ್ಯಾಚ್