ವಿಶ್ವಕಪ್ ಕ್ರಿಕೆಟ್ ಗೆ ಮಳೆ ಕಾಟ: ಎರಡು ದಿನದಿಂದ ಪಂದ್ಯವೇ ನಡೆದಿಲ್ಲ

Webdunia
ಬುಧವಾರ, 12 ಜೂನ್ 2019 (09:30 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ರೋಚಕತೆಗೆ ಮಳೆ ತಣ್ಣೀರೆರಚಿದೆ. ಮಳೆಯಿಂದಾಗಿ ಕಳೆದ ಎರಡು ದಿನಗಳಿಂದ ಪಂದ್ಯಗಳೇ ನಡೆದಿಲ್ಲ.


ನಿನ್ನೆ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಮೊನ್ನೆ ನಡೆಯಬೇಕಿದ್ದ ದ.ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅದಕ್ಕೂ ಮೊದಲು ಲಂಕಾ-ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದನ್ವಯ ನಿರ್ಧಾರವಾಗಿತ್ತು. ಇದಲ್ಲದೆ ಲಂಕಾ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಿತ್ತು. ಇದರೊಂದಿಗೆ ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ.

ಇದರಿಂದ ಹೆಚ್ಚು ನಷ್ಟವಾಗಿದ್ದು ಶ್ರೀಲಂಕಾ ತಂಡಕ್ಕೆ ಆ ತಂಡಕ್ಕೆ ಸತತವಾಗಿ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದೇ ಎದುರಾಳಿಯೊಂದಿಗೆ ಅಂಕ ಹಂಚಿಕೊಳ್ಳಬೇಕಾಗಿದೆ. ಬಾಂಗ್ಲಾದೇಶಕ್ಕೂ ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ ಹಾದಿ ಸುಗಮಗೊಳಿಸುವ ವಿಶ್ವಾಸವಿತ್ತು. ಆದರೆ ಮಳೆಯಿಂದಾಗಿ ಸಂಕಟ ಎದುರಾಗಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಕೆಲವು ದಿನ ಇಂಗ್ಲೆಂಡ್ ನಲ್ಲಿ ಮಳೆ ಮುಂದುವರಿಯಲಿದೆ. ಹೀಗಾಗಿ ಮತ್ತಷ್ಟು ಪಂದ್ಯಗಳು ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು ನಿರಾಸೆಗೆ ನೂಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ 8 ವಿಕೆಟ್ ಕಿತ್ತ ಮೊಹಮ್ಮದ್ ಶಮಿ: ಬೆಂಕಿ ಬೌಲಿಂಗ್ ವಿಡಿಯೋ ನೋಡಿ

T20 WC: ಪ್ರೆಸ್ ಕಾನ್ಫರೆನ್ಸ್ ಹಾಲ್ ನಲ್ಲೇ ಪಾಕಿಸ್ತಾನ ಪತ್ರಕರ್ತರ ನಮಾಜ್ Video

T20 WC: ದೈತ್ಯ ಆಸ್ಟ್ರೇಲಿಯಾವನ್ನೇ ಹೊರದಬ್ಬಿ ಸೂಪರ್ 8 ಕ್ಕೇರಿದ ಶ್ರೀಲಂಕಾ: ಇದಕ್ಕೆಲ್ಲಾ ಆ ಒಬ್ಬರೇ ಕಾರಣ

ಕೋಪ ಬೇಡ ಕುಚಿಕು.. ಕುಲದೀಪ್ ಯಾದವ್ ಗೆ ಬೈದಿದ್ದ ಸೂರ್ಯಕುಮಾರ್ ಯಾದವ್ ಈಗ ಮಾಡಿದ್ದೇನು Video

ನಿನ್ನೆ ಮೈದಾನದಲ್ಲಿ ಗರಂ, ಇಂದು ಕೂಡಾ ಕುಲ್‌ದೀಪ್‌ರನ್ನು ಸೂರ್ಯಕುಮಾರ್ ಹೀಗೇ ನಡೆಸಿಕೊಳ್ಳುವುದಾ, Video

ಮುಂದಿನ ಸುದ್ದಿ
Show comments