Publish Date: Tue, 10 Apr 2018 (09:11 IST)
Updated Date: Tue, 10 Apr 2018 (09:13 IST)
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕ್ರಿಕೆಟ್ ಬಿಟ್ಟು ಕೆಲ ಸಮಯ ಕುಟುಂಬದ ಜತೆ ಸಮಯ ಕಳೆದಿದ್ದಾರೆ.
ಕುಟುಂಬ ಸದಸ್ಯರ ಜತೆಗೆ ರಿಷಿಕೇಷಕ್ಕೆ ಬಂದ ದ್ರಾವಿಡ್ ಇಲ್ಲಿ ನಡೆಯುವ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕುಟುಂಬ ಸಮೇತ ಗಂಗಾ ಆರತಿ ಮಾಡಿದ ದ್ರಾವಿಡ್ ನಂತರ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾದರು.
ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಐಪಿಎಲ್ ನಿಂದಾಗಿ ಕೊಂಚ ಬಿಡುವಿನ ಸಮಯ ಕಳೆಯುತ್ತಿದ್ದಾರೆ. ತಮ್ಮ ಪತ್ನಿ ಮಕ್ಕಳೊಂದಿಗೆ ಅವರು ಈ ವೇಳೆಯನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.