Webdunia - Bharat's app for daily news and videos

Install App

ಉರಿ ದಾಳಿ: ಪಾಕ್ ಜತೆ ಕ್ರಿಕೆಟ್ ಆಡುವ ಪ್ರಶ್ನೆಯೇ ಇಲ್ಲ ಎಂದ ಬಿಸಿಸಿಐ

Webdunia
ಶನಿವಾರ, 24 ಸೆಪ್ಟಂಬರ್ 2016 (14:52 IST)
ಉರಿ ಸೇನಾನೆಲೆಯ ಮೇಲೆ ನಡೆದ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಮರ ಕಾವು ಪಡೆದುಕೊಂಡಿದೆ. ದೇಶದ ಎಲ್ಲೆಡೆಗಳಿಂದ ಪಾಕ್ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಪಾಕ್ ಜತೆ ಭಾರತ ತಂಡ ಕ್ರಿಕೆಟ್ ಆಡುವುದಿಲ್ಲ ಎಂದು ಖಡಕ್ ನಿರ್ಣಯವನ್ನು ಪ್ರಕಟಿಸಿದೆ. 
ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬುದನ್ನು ನಾವು ಜಗಜ್ಜಾಹೀರುಗೊಳಿಸಬೇಕಿದೆ. ಪಾಕ್ ಜತೆ ಕ್ರಿಕೆಟ್ ಆಡುವ ಪ್ರಶ್ನೆಯೇ ಇಲ್ಲ ಎಂದು ಬಿಸಿಸಿಐ ಅಧ್ಯಕ್ಷ, ಲೋಕಸಭಾ ಸದಸ್ಯ ಅನುರಾಗ್ ಠಾಕೂರ್ ತಿಳಿಸಿದ್ದಾರೆ. 
 
ಅಪಾರ ಪ್ರಮಾಣದ ಶಸಸ್ತ್ರಧಾರಿ ನಾಲ್ವರು ಉಗ್ರರು ಕಳೆದ ಭಾನುವಾರ ಉರಿ ಸೇನಾ ನೆಲೆ ಮೇಲೆ ದಾಳಿ ಮಾಡಿ 18 ಸೈನಿಕರ ಸಾವಿಗೆ ಕಾರಣರಾಗಿದ್ದರು. ಕಳೆದ ಎರಡು ದಶಕಗಳಲ್ಲಿ ಉಗ್ರರು ಎಸಗಿರುವ ಅತ್ಯಂತ ಘೋರ ದಾಳಿ ಇದಾಗಿದೆ. 
 
ಇದು ವಿಶ್ವಸಂಸ್ಥೆಯ 71ನೇ ಅಧಿವೇಶನದಲ್ಲೂ ಬಿಸಿ ಚರ್ಚೆಗೆ ಕಾರಣವಾಗಿದೆ. ಪ್ರದೇಶದಲ್ಲಿನ ಪ್ರಾದೇಶಿಕ ಅಸ್ಥಿರತೆಗಾಗಿ ಅಧಿವೇಶನದಲ್ಲಿ ಎರಡು ರಾಷ್ಟ್ರಗಳು ಪರಷ್ಪರ ದೋಷಾರೋಪಣೆ ಮಾಡುತ್ತಿವೆ.
 
ಪಾಕ್ ಮೇಲೆ ಯುದ್ಧ ಸಾರಬೇಕು ಎಂದು ದೇಶದಲ್ಲಿ ವ್ಯಾಪಕ ಒತ್ತಾಯ ಕೂಡ ಕೇಳಿ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿರುವ ಪಂಜಾಬ್‌ಗೆ ಬಿಗ್ ಶಾಕ್‌

ಟೂರ್ನಿಯಿಂದ ಚೆನ್ನೈ ತಂಡ ಹೊರಬೀಳುತ್ತಿದ್ದಂತೆ ಮುಂದಿನ ಐಪಿಎಲ್‌ ಆಡುವ ಬಗ್ಗೆ ಧೋನಿ ಹೇಳಿದ್ದೇನು

Dhoni six video: ಸಿಎಸ್ ಕೆ ಕ್ಯಾಪ್ಟನ್ ಧೋನಿ ಸಿಕ್ಸರ್, ಸಿಎಸ್ ಕೆ ಬೌಲರ್ ರವೀಂದ್ರ ಜಡೇಜಾ ಕ್ಯಾಚ್

IPL 2025: ಸೂಪರ್‌ ಕಿಂಗ್ಸ್ ಗಾಯಕ್ಕೆ ಉಪ್ಪು ಸವರಿದ ಕಿಂಗ್ಸ್‌: ಟೂರ್ನಿಯಿಂದ ಧೋನಿ ಪಡೆ ಔಟ್‌

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

ಮುಂದಿನ ಸುದ್ದಿ
Show comments