Webdunia - Bharat's app for daily news and videos

Install App

ಜಟಾಪಟಿ ಬಳಿಕ ಮುಖಾಮುಖಿಯಾದ ಸೌರವ್- ರವಿ ಶಾಸ್ತ್ರಿ

Webdunia
ಶುಕ್ರವಾರ, 23 ಸೆಪ್ಟಂಬರ್ 2016 (16:10 IST)
ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಿಸಿದ ಬಳಿಕ ಇದೇ ಮೊದಲ ಬಾರಿಗೆ ರವಿ ಶಾಸ್ತ್ರಿ ಮತ್ತು ಸೌರವ್ ಗಂಗೂಲಿ ಒಂದೇ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುವಾರದಿಂದ ಪ್ರಾರಂಭವಾಗಿರುವ ಭಾರತ - ನ್ಯೂಜಿಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯ ಭಾರತದ ಪಾಲಿಗೆ 500ನೇ ಟೆಸ್ಟ್ ಪಂದ್ಯವಾಗಿದ್ದರಿಂದ ಬಿಸಿಸಿಐ ಆಹ್ವಾನಿಸಿದ್ದ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಇವರು ಕೂಡ ಸೇರಿದ್ದರು. 
ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಆಯ್ಕೆ ಪ್ರಕ್ರಿಯೆಯಲ್ಲಿ ಗಂಗೂಲಿ ಶಾಸ್ತ್ರಿ ಅವರನ್ನು ಅವಮಾನಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. 
 
ಕ್ರಿಕೆಟ್ ಸಲಹಾ ಸಮಿತಿ ತಮ್ಮ ಸಂದರ್ಶನ ನಡೆಸುವಾಗ ಅಲಭ್ಯರಾಗುವ ಮೂಲಕ ಗಂಗೂಲಿ ತಮಗೆ ಅಗೌರವ ತೋರಿದ್ದಾರೆಂದು ಶಾಸ್ತ್ರಿ ಆಕ್ರೋಶ ವ್ಯಕ್ತ ಪಡಿಸಿದ್ದರು. 
 
ಆದರೆ ಅವರ ಆರೋಪವನ್ನು ತಳ್ಳಿ ಹಾಕಿದ್ದ ಗಂಗೂಲಿ ತಾವು ಅಧ್ಯಕ್ಷರಾಗಿರುವ ಬಂಗಾಳ್ ಕ್ರಿಕೆಟ್ ಸಮಿತಿಯ ಅತಿ ಮಹತ್ವದ ಸಭೆಗೆ ಹಾಜರಾಗಲು ತೆರಳಿದ್ದಕ್ಕೆ ತಾವು ಗೈರು ಹಾಜರಾಗಿದ್ದಾಗಿ ಹೇಳಿದ್ದರು. ಬಳಿಕ ಸಹ ಅವರ ನಡುವೆ ವಾಕ್ಸಮರ ಮುಂದುವರೆದಿತ್ತು.
 
ಈ ಘಟನೆಯ ಬಳಿಕ ಶಾಸ್ತ್ರಿ ಸ್ವಲ್ಪ ದಿನ ಬ್ರೇಕ್ ತೆಗೆದುಕೊಂಡು ಬಳಿಕ ಬಿಸಿಸಿಐನ ಮಾಧ್ಯಮ ಪ್ರತಿನಿಧಿಯಾಗಿ ಮುಂದುವರೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

MI vs RR Match:35ಎಸೆತದಲ್ಲಿ ಶತಕ ಸಿಡಿಸಿ ಮೋಡಿ ಮಾಡಿದ್ದ ವೈಭವ್ ಸೂರ್ಯವಂಶಿ ಇಂದು ಕಳಿಸಿದ್ದು ಸೊನ್ನೆ

RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

Vignesh Puthur, ಮುಂಬೈ ತಂಡಕ್ಕೆ ಆಘಾತ; ಉದಯೋನ್ಮುಖ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರು ಟೂರ್ನಿಯಿಂದ ಔಟ್‌

IPL 2025: ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿರುವ ಪಂಜಾಬ್‌ಗೆ ಬಿಗ್ ಶಾಕ್‌

ಟೂರ್ನಿಯಿಂದ ಚೆನ್ನೈ ತಂಡ ಹೊರಬೀಳುತ್ತಿದ್ದಂತೆ ಮುಂದಿನ ಐಪಿಎಲ್‌ ಆಡುವ ಬಗ್ಗೆ ಧೋನಿ ಹೇಳಿದ್ದೇನು

ಮುಂದಿನ ಸುದ್ದಿ
Show comments