Publish Date: Sat, 29 Jul 2023 (10:04 IST)
Updated Date: Sat, 29 Jul 2023 (10:06 IST)
ಮುಂಬೈ: ಟೀಂ ಇಂಡಿಯಾದಲ್ಲಿ ಪ್ರತೀ ಸರಣಿಗೊಬ್ಬರಂತೆ ಹೊಸಬರ ಆಗಮನವಾಗುತ್ತಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿಯಿದೆ.
ಈ ನಡುವೆ ಕೆಲವು ಕ್ರಿಕೆಟಿಗರು ಅವಕಾಶವಿಲ್ಲದೇ ಕಳೆದುಹೋಗಿದ್ದಾರೆ. ಅಂತಹವರಲ್ಲಿ ವೇಗಿ ಭುವನೇಶ್ವರ್ ಕುಮಾರ್ ಕೂಡಾ ಒಬ್ಬರು. ಭುವಿ ಕಳೆದ ವರ್ಷ ಕೊನೆಯದಾಗಿ ಭಾರತದ ಪರ ಆಡಿದ್ದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅವರಿಗೆ ಮತ್ತೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.
ಈಗ ತಮ್ಮ ಸೋಷಿಯಲ್ ಮೀಡಿಯಾ ಪುಟದ ಪ್ರೊಫೈಲ್ ನಲ್ಲಿದ್ದ ಕ್ರಿಕೆಟಿಗ ಎನ್ನುವ ಪದವನ್ನು ಕಿತ್ತು ಹಾಕಿದ್ದು, ಕೇವಲ ಭಾರತೀಯ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ 32 ವರ್ಷದ ವೇಗಿ ನಿವೃತ್ತಿಯ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.