Webdunia - Bharat's app for daily news and videos

Install App

ಕ್ರಿಕೆಟ್ ಡಿಆರ್‌ಎಸ್‌ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಸಾಧ್ಯತೆ

Webdunia
ಶುಕ್ರವಾರ, 10 ಜೂನ್ 2016 (19:29 IST)
ಕ್ರಿಕೆಟ್ ವಿವಾದಾತ್ಮಕ ತೀರ್ಪು ಮರುಪರಿಶೀಲನೆ ವ್ಯವಸ್ಥೆ(ಡಿಆರ್‌ಎಸ್ )ಯಲ್ಲಿ ಬ್ಯಾಟ್ಸ್‌ಮನ್‌ಗೆ ಬೆನಿಫಿಟ್ ಆಫ್ ಡೌಟ್ ನೀಡುವುದನ್ನು ಶೀಘ್ರದಲ್ಲೇ ಅರ್ಧಕ್ಕೆ ಇಳಿಸುವ ಸಾಧ್ಯತೆಯಿರುತ್ತದೆ. ಪ್ರಸಕ್ತ ಎಲ್‌ಬಿಡಬ್ಲ್ಯು ತೀರ್ಪು ನೀಡಲು ಬಲ ಅಥವಾ ಎಡ ಸ್ಟಂಪ್‌ಗೆ ಚೆಂಡಿನ ಅರ್ಧಭಾಗ ತಾಗಿದರೆ ಮಾತ್ರ ಮೂರನೇ ಅಂಪೈರ್ ಬೌಲರ್ ಪರವಾಗಿ ತೀರ್ಪನ್ನು ನೀಡುತ್ತಾರೆ.

ಆದಾಗ್ಯೂ, ಮಾಜಿ ಶ್ರೀಲಂಕಾ ನಾಯಕ ಜಯವರ್ದನೆ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದು, ಈ ನಿಯಮಕ್ಕೆ ಬದಲಾವಣೆಯನ್ನು ಚರ್ಚಿಸಲಾಗಿದ್ದು, ಆಡಳಿತ ಮಂಡಳಿಗೆ ಇದನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ.
 
 ಶೇ. 50ರಷ್ಟು ನಿಯಮವನ್ನು ಶೇ. 25ಕ್ಕೆ ಇಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಜಯವರ್ದನೆ ತಿಳಿಸಿದರು.  ಎಂಸಿಸಿ ನಿಯಮ ಪುಸ್ತಕದಲ್ಲಿ ಕೂಡ ಚೆಂಡು ಸ್ಟಂಪನ್ನು  ತಾಗಿದರೆ ನಾಟೌಟ್ ತೀರ್ಪನ್ನು ತಳ್ಳಿಹಾಕಬೇಕೆಂದು ತಿಳಿಸಿದೆ. ಹೊಸ ನಿಯಮದಡಿ ಶೇ. 25ರಷ್ಟು ಚೆಂಡು ವಿಕೆಟ್‌ಗೆ ತಾಗಿದರೂ ಕೂಡ ತೀರ್ಪನ್ನು ತಳ್ಳಿಹಾಕಬೇಕು ಎಂದಿದೆ.
 
 ಇಂಗ್ಲೆಂಡ್ ಮತ್ತು ಶ್ರೀಲಂಕಾದ ಮೂರನೇ ಟೆಸ್ಟ್ ಪಂದ್ಯದ ಆರಂಭದ ದಿನ ಈ ವಿಷಯ ಮತ್ತೆ ಬೆಳಕಿಗೆ ಬಂದಿದ್ದು, ಜಾನಿ ಬೇರ್ ಸ್ಟೋ 57 ರನ್‌ಗಳಾಗಿದ್ದಾಗ ಬಿಗಿಯಾದ ರಿವ್ಯೂನಿಂದ ಬಚಾವಾದರು. ಅರ್ಧಕ್ಕಿಂತ ಸ್ವಲ್ಪ ಕಡಿಮೆ ಚೆಂಡು ಸ್ಟಂಪ್‌ಗೆ ತಾಗಿದ್ದು ಬೈರ್‌‍ಸ್ಟೋಗೆ ಅಂಪೈರ್ ನಾಟೌಟ್ ನೀಡಿದ್ದರು. ಈ ತೀರ್ಪು ಪುನರ್ಪರಿಶೀಲನೆಯಲ್ಲಿ ಕೂಡ ಥರ್ಡ್ ಅಂಪೈರ್ ತೀರ್ಪನ್ನು ಎತ್ತಿಹಿಡಿದಿದ್ದರು. 
 
ಇದರಿಂದ ಜಯವರ್ದನೆ ಅವರ ಸಹಆಟಗಾರ ಮತ್ತು ಸ್ನೇಹಿತ ಕುಮಾರ್ ಸಂಗಕ್ಕರಾ ಬೇಸರಗೊಂಡಿದ್ದರು. ಈ ತೀರ್ಪಿನಿಂದ ಜೀವದಾನ ಪಡೆದ ಬೈರ್‌ಸ್ಟೋ 107 ರನ್ ಶತಕ ಸಿಡಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

ಮುಂದಿನ ಸುದ್ದಿ
Show comments