ರೋಹಿತ್ ಶರ್ಮಾರನ್ನೇ ಸುಮ್ಮನಾಗಿಸಿದ ಕೆಎಲ್ ರಾಹುಲ್ ಇಲ್ಲಿದೆ ವಿಡಿಯೋ

Krishnaveni K
ಶನಿವಾರ, 3 ಆಗಸ್ಟ್ 2024 (09:37 IST)
Photo Credit: BCCI
ಕೊಲಂಬೊ: ಹಲವು ದಿನಗಳ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವ ಕೆಎಲ್ ರಾಹುಲ್ ತಾವೆಂಥಾ ಉಪಯುಕ್ತ ಆಟಗಾರ ಎಂಬುದನ್ನು ನಿನ್ನೆಯ ಪಂದ್ಯದಲ್ಲಿ ನಿರೂಪಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟಿಗನಾಗಿ ರಾಹುಲ್ ಕಣಕ್ಕಿಳಿದಿದ್ದರು. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ ಕೆಎಲ್ ರಾಹುಲ್ ನಾಯಕ ರೋಹಿತ್ ಶರ್ಮಾರನ್ನೇ ಸುಮ್ಮನಾಗಿಸಿ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶ್ರೀಲಂಕಾ ಇನಿಂಗ್ಸ್ ನ 14 ನೇ ಓವರ್ ನಲ್ಲಿ ಶಿವಂ ದುಬೆ ಬೌಲಿಂಗ್ ನಲ್ಲಿ ಪಥುಮ್ ನಿಸಂಕಾ ಮೈ ಸವರಿಕೊಂಡು ಬಾಲ್ ಕೀಪರ್ ಕೈ ಸೇರಿತ್ತು. ಈ ವೇಳೆ ರಾಹುಲ್ ಸೇರಿದಂತೆ ಎಲ್ಲಾ ಆಟಗಾರರೂ ಕ್ಯಾಚ್ ಔಟ್ ಗೆ ಮನವಿ ಮಾಡಿದರು. ಆದರೆ ಬಳಿಕ ರಾಹುಲ್ ಗೆ ಇದು ಬ್ಯಾಟ್ ಗೆ ಸವರಿಲ್ಲ ಎನ್ನುವುದು ಖಚಿತವಾಗಿತ್ತು.

ಹೀಗಾಗಿ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಎನ್ನುವ ಗೊಂದಲದಲ್ಲಿದ್ದ ರೋಹಿತ್ ಬಳಿ ಹೋದ ರಾಹುಲ್ ಡಿಆರ್ ಎಸ್ ತೆಗೆದುಕೊಳ್ಳದಂತೆ ಕನ್ವಿನ್ಸ್ ಮಾಡಿದರು. ರಾಹುಲ್ ಮಾತಿಗೆ ಒಪ್ಪಿದ ರೋಹಿತ್ ಡಿಆರ್ ಎಸ್ ತೆಗೆದುಕೊಳ್ಳಲಿಲ್ಲ. ರಿಪ್ಲೇ ನೋಡಿದಾಗ ರಾಹುಲ್ ನಿರ್ಧಾರ ಸರಿಯಾಗಿತ್ತು. ಈ ಮೂಲಕ ಭಾರತಕ್ಕೆ ಒಂದು ರಿವ್ಯೂವನ್ನು ರಾಹುಲ್ ಉಳಿಸಿದ್ದರು. ಈ ಹಿಂದೆ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲೂ ರಾಹುಲ್ ವಿಕೆಟ್ ಕೀಪರ್ ಆಗಿ ಡಿಆರ್ ಎಸ್ ವಿಚಾರದಲ್ಲಿ ರೋಹಿತ್ ಗೆ ಕರಾರುವಾಕ್ ಆಗಿ ಸಲಹೆ ನೀಡುತ್ತಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡ್ತೀನಿ ಆದ್ರೆ ಒಂದು ಷರತ್ತು: ಮೊಹ್ಸಿನ್ ನಖ್ವಿ ಕೊಬ್ಬು ಎಷ್ಟಿದೆ ನೋಡಿ

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments