Publish Date: Sun, 31 Jul 2022 (09:50 IST)
Updated Date: Sun, 31 Jul 2022 (09:51 IST)
ಬೆಂಗಳೂರು: ಜಿಂಬಾಬ್ವೆ ಸರಣಿಗೆ ಫಿಟ್ ಆಗಿ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ನಿನ್ನೆ ಬಿಸಿಸಿಐ ಜಿಂಬಾಬ್ವೆ ಸರಣಿಗೆ ಶಿಖರ್ ಧವನ್ ನೇತೃತ್ವದಲ್ಲಿ ಯುವ ಕ್ರಿಕೆಟಿಗರ ತಂಡ ಪ್ರಕಟಿಸಿದ್ದು, ರಾಹುಲ್ ಹೆಸರಿರಲಿಲ್ಲ.
ಇದರ ಬೆನ್ನಲ್ಲೇ ರಾಹುಲ್ ಫಿಟ್ನೆಸ್ ಬಗ್ಗೆ ನಾನಾ ಊಹಾಪೋಹಗಳು ಎದ್ದಿತ್ತು. ಈ ಕಾರಣಕ್ಕೆ ಸ್ವತಃ ರಾಹುಲ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಜೂನ್ ನಲ್ಲಿ ನನಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದ್ದು, ವಿಂಡೀಸ್ ಸರಣಿಗೆ ತಂಡಕ್ಕೆ ಮರಳಬಹುದು ಎಂಬ ವಿಶ್ವಾಸದಲ್ಲಿದ್ದೆ. ಆದರೆ ಆಗ ನನಗೆ ಕೊರೋನಾ ಕಾಣಿಸಿಕೊಂಡಿತು. ಇದರಿಂದಾಗಿ ನಾನು ಫಿಟ್ನೆಸ್ ಮರಳಲು ವಹಿಸುತ್ತಿದ್ದ ಶ್ರಮಕ್ಕೆ ಹಿನ್ನಡೆಯಾಯ್ತು. ಆದಷ್ಟು ಬೇಗ ಫಿಟ್ ಆಗಿ ತಂಡ ಸೇರಿಕೊಳ್ಳುತ್ತೇನೆಂಬ ವಿಶ್ವಾಸದಲ್ಲಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಗೌರವ, ತಂಡಕ್ಕೆ ಮರಳಲು ಕಾತುರನಾಗಿದ್ದೇನೆ ಎಂದು ರಾಹುಲ್ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.