Select Your Language

Notifications

webdunia
webdunia
webdunia
webdunia

ಅಶ್ವಿನ್ ಬಗ್ಗೆ ಎಚ್ಚರ ಎಂದ ಕೆವಿನ್ ಪೀಟರ್ಸನ್

ಅಶ್ವಿನ್ ಬಗ್ಗೆ ಎಚ್ಚರ ಎಂದ ಕೆವಿನ್ ಪೀಟರ್ಸನ್
Mumbai , ಶುಕ್ರವಾರ, 4 ನವೆಂಬರ್ 2016 (08:45 IST)
ಮುಂಬೈ: ಭಾರತದ ವಿರುದ್ಧ ಟೆಸ್ಟ್ ಸರಣಿ ಆಡುವಾಗ ಪ್ರಮುಖವಾಗಿ ಅವರ ಸ್ಪಿನ್ ಜೋಡಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಗ್ಗೆ ಎಚ್ಚರವಾಗಿರಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಎಚ್ಚರಿಕೆ ನೀಡಿದ್ದಾರೆ.

ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅನುಭವವಿರುವ ಕೆವಿನ್, ಅಶ್ವಿನ್ ರ ದೂಸ್ರಾ ಎಸೆತಗಳನ್ನು ಎದುರಿಸಲು ಸಾಧ್ಯವಾದರೆ ಮೇಲುಗೈ ಸಾಧಿಸಿದಂತೆ ಎಂದು ತಮ್ಮ ತಂಡದ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.

“ನನಗೆ ಅಶ್ವಿನ್ ದೂಸ್ರಾ ಎಸೆತ ಎದುರಿಸಲು ಕಷ್ಟವಾಗುತ್ತಿರಲಿಲ್ಲ. ಹೀಗಾಗಿ ಭಾರತದ ಎದುರು ಯಶಸ್ವಿಯಾದೆ. ಆದರೆ ಇಂಗ್ಲೆಂಡ್ ನ ಆಟಗಾರರು ಇದನ್ನು ಕಲಿಯಬೇಕು. ಅಲ್ಲಿ ಕೆಳ ಹಂತದಲ್ಲಿ ಬೌನ್ಸ್ ಆಗುವ ಆಫ್ ಸ್ಪಿನ್ ಬೌಲಿಂಗ್ ನಲ್ಲಿ ಆಡುವುದು ಕಷ್ಟವೇ. ಆದರೂ ಯಶಸ್ಸು ಸಿಗಬೇಕಾದರೆ ಹೀಗೇ ಮಾಡಬೇಕು” ಎಂದು ಕೆವಿನ್ ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನಕ್ಕೆ ಸೋಲು