Webdunia - Bharat's app for daily news and videos

Install App

ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಗೆ ಖುದ್ದು ಫೋನ್ ಮಾಡಿ ವಾರ್ನ್ ಮಾಡಿದ್ದ ಜಯ್ ಶಾ

Krishnaveni K
ಗುರುವಾರ, 29 ಫೆಬ್ರವರಿ 2024 (08:46 IST)
ಮುಂಬೈ: ಮಾತು ಕೇಳದ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಗೆ ವಾರ್ಷಿಕ ಗುತ್ತಿಗೆಯಿಂದ ಕೈ ಬಿಟ್ಟು ಬಿಸಿಸಿಐ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಇದಕ್ಕೆ ಮೊದಲು ಇಬ್ಬರಿಗೂ ಖುದ್ದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕರೆ ಮಾಡಿ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ.

ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಯುವ ಕ್ರಿಕೆಟಿಗರು ಟೆಸ್ಟ್ ಮಾದರಿ ಆಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಅಪವಾದಗಳು ಕೇಳಿಬಂದಿವೆ. ಸ್ವತಃ ರೋಹಿತ್ ಶರ್ಮಾ ಇತ್ತೀಚೆಗೆ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಮೊದಲು ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಕುಂಟು ನೆಪ ಹೇಳಿ ತಂಡದಿಂದ ಹೊರ ನಡೆದಿದ್ದು ಕಾರಣವಾಗಿತ್ತು.

ಇಶಾನ್ ಕಿಶನ್ ಗೆ ತಂಡಕ್ಕೆ ಮರಳಬೇಕಾದರೆ ರಣಜಿ ಆಡಲು ಸೂಚಿಸಲಾಗಿತ್ತು. ಆದರೂ ಕೇರ್ ಮಾಡದ ಅವರು ಐಪಿಎಲ್ ತಯಾರಿ ಶುರು ಮಾಡಿಕೊಂಡಿದ್ದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಇಲ್ಲದ ಗಾಯದ ನೆಪ ಹೇಳಿ ರಣಜಿ ಪಂದ್ಯ ತಪ್ಪಿಸಿಕೊಳ್ಳಲು ನೋಡಿದ್ದರು. ಇವರಿಬ್ಬರ ಕಳ್ಳಾಟ ಬಯಲಾಗುತ್ತಿದ್ದಂತೇ ಬಿಸಿಸಿಐ ಗರಂ ಆಗಿತ್ತು.

ಇದೇ ಕಾರಣಕ್ಕೆ ಇಬ್ಬರನ್ನೂ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಹೊರಹಾಕಲಾಗಿತ್ತು. ಇದರ ಜೊತೆಗೆ ಇಬ್ಬರೂ ಆಟಗಾರರಿಗೆ ಖುದ್ದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಫೋನ್ ಕರೆ ಮಾಡಿ ವಾರ್ನ್ ಮಾಡಿದ್ದಾರಂತೆ. ಆಯ್ಕೆಗಾರರು, ಟೀಂ ಇಂಡಿಯಾ ಕೋಚ್ ಅಥವಾ ನಾಯಕ ದೇಶೀಯ ಕ್ರಿಕೆಟ್ ಅಥವಾ ರೆಡ್ ಬಾಲ್ ಕ್ರಿಕೆಟ್ ಆಡಲು ಸೂಚಿಸಿದರೆ ಅದನ್ನು ಪಾಲಿಸಬೇಕು ಎಂದು ಸ್ವತಃ ಜಯ್ ಶಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಭಾರತ ತಂಡದಲ್ಲಿ ಅವಕಾಶ ಸಿಗಬೇಕಾದರೆ ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕು ಎಂಬ ನಿಯಮ ಪಾಲಿಸಲೇಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

IND vs ENG: ಆ ಒಂದು ಯಾರ್ಕರ್ ಮೊಹಮ್ಮದ್ ಸಿರಾಜ್ ಜೀವನದಲ್ಲೇ ಮರೆಯಲ್ಲ: video

IND vs ENG: ಗೌತಮ್ ಗಂಭೀರ್ ಗೆ ಅಹಂ ಜಾಸ್ತಿಯಾಯ್ತು, ಇಲ್ಲಾಂದ್ರೆ ಹೀಗೆ ಮಾಡ್ತಿದ್ರಾ

ಕಣ್ಣು ಕುಕ್ಕಿದ ಇಂಗ್ಲೆಂಡ್ ಪ್ರೇಕ್ಷಕನ ಕೆಂಪು ಟೀ ಶರ್ಟ್‌, ಕ್ರೀಸ್‌ನಲ್ಲಿದ್ದ ಜಡೇಜಾ ಮಾಡಿದ್ದೇನು ಗೊತ್ತಾ

ಕೆಣಕಿದ ಕ್ರಾಲಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್‌ ಸಿರಾಜ್‌: ಕುತೂಹಲಕರ ಘಟ್ಟದತ್ತ ಐದನೇ ಟೆಸ್ಟ್‌

ಮುಂದಿನ ಸುದ್ದಿ
Show comments