Webdunia - Bharat's app for daily news and videos

Install App

ಭಾರತ ಬಿಟ್ಟು ಕೆನಡಾದಲ್ಲಿ ನೆಲೆಸಲು ಹೊರಟಿದ್ದ ಜಸ್ಪ್ರೀತ್ ಬುಮ್ರಾ

Krishnaveni K
ಶುಕ್ರವಾರ, 12 ಏಪ್ರಿಲ್ 2024 (13:21 IST)
ಮುಂಬೈ: ಟೀಂ ಇಂಡಿಯಾದ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ ಹಿಂದೊಮ್ಮೆ ಕೆನಡಾ ದೇಶಕ್ಕೆ ವಲಸೆ ಹೋಗಲು ಯೋಜನೆ ರೂಪಿಸಿದ್ದರಂತೆ. ಈ ವಿಚಾರವನ್ನು ಅವರು ತಮ್ಮ ಪತ್ನಿ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಜೊತೆಗಿನ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಕೆನಡಾದಲ್ಲಿ ನನ್ನ ಮಾವ ಮತ್ತು ಬಂಧುಗಳಿದ್ದಾರೆ. ಹೀಗಾಗಿ ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಪೂರ್ತಿ ಮಾಡಿ ಆ ದೇಶದ ಪರವಾಗಿಯೇ ಕ್ರಿಕೆಟ್ ಆಡೋಣವೆಂದುಕೊಂಡಿದ್ದೆ. ಯಾಕೆಂದರೆ ಭಾರತದಲ್ಲಿ ಅವಕಾಶ ಸಿಗಲ್ಲ ಎಂದುಕೊಂಡಿದ್ದೆ. ನನ್ನ ತಾಯಿ ತಡೆಯದೇ ಹೋಗಿದ್ದರೆ ಬಹುಶಃ ನಾನು ಈಗ ಕೆನಡಾದ ಕ್ರಿಕೆಟಿಗನಾಗಿರುತ್ತಿದ್ದೆ ಎಂದಿದ್ದಾರೆ.

ನಾನು ಮಾತ್ರವಲ್ಲದೆ, ನನ್ನ ಇಡೀ ಕುಟುಂಬ ಕೆನಡಾಗೆ ವಲಸೆ ಹೋಗೋಣವೆಂದುಕೊಂಡಿದ್ದೆವು. ಆದರೆ ನನ್ನ ತಾಯಿಗೆ ಇಷ್ಟವಿರಲಿಲ್ಲ. ಅಲ್ಲಿನ ಸಂಸ್ಕೃತಿ ನಮಗೆ ಸರಿಬರಲ್ಲ ಎಂದು ತಾಯಿ ತಡೆದರು. ಹೀಗಾಗಿ ಕೆನಡಾಗೆ ಹೋಗುವ ಪ್ಲ್ಯಾನ್ ರದ್ದಾಯಿತು ಎಂದು ಬುಮ್ರಾ ಬಹಿರಂಗಪಡಿಸಿದ್ದಾರೆ.

ಅದೃಷ್ಟವಶಾತ್ ಜಾನ್ ರೈಟ್ ನನ್ನನ್ನು ಗಮನಿಸಿ 19 ವರ್ಷದವನಾಗಿದ್ದಾಗಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಖರೀದಿ ಮಾಡಿದರು. ಆಗ ನಾನಿನ್ನೂ ರಣಜಿಯನ್ನೂ ಆಡಿರಲಿಲ್ಲ. ಆವತ್ತು ಬಹುಶಃ ನಾನು ಕೆನಡಾಗೆ ಹೋಗುವ ನಿರ್ಧಾರದಂತೆ ನಡೆದುಕೊಂಡಿದ್ದರೆ ಇಂದು ನನಗೆ ಭಾರತ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುವ ಅವಕಾಶವೇ ಇರುತ್ತಿರಲಿಲ್ಲ ಎಂದು ಬುಮ್ರಾ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments