Webdunia - Bharat's app for daily news and videos

Install App

ಸೋತಾಗ ಯಾರೂ ಇಲ್ಲ, ಗೆದ್ದಾಗ ಎಲ್ಲರೂ ಇರ್ತಾರೆ: ಜಸ್ಪ್ರೀತ್ ಬುಮ್ರಾ ಟಾಂಗ್ ಕೊಟ್ಟಿದ್ದು ಯಾರಿಗೆ?

Krishnaveni K
ಗುರುವಾರ, 8 ಫೆಬ್ರವರಿ 2024 (10:34 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಿನ್ನೆ ಪ್ರಕಟಿಸಿದ್ದ ಸ್ಟೋರಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ನಿನ್ನೆ ಬಿಡುಗಡೆಯಾಗಿದ್ದ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಮೂರೂ ಫಾರ್ಮ್ಯಾಟ್ ನಲ್ಲಿ ನಂ.1 ಬೌಲರ್ ಎನಿಸಿಕೊಂಡ ಹೆಮ್ಮೆ ಅವರದ್ದಾಗಿತ್ತು. ಈ ದಾಖಲೆ ಮಾಡಿದ ಬೆನ್ನಲ್ಲೇ ಬುಮ್ರಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸ್ಟೋರಿ ಹಾಕಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಬುಮ್ರಾ ಟಾಂಗ್ ಕೊಟ್ಟಿದ್ದು ಯಾರಿಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.

ಬುಮ್ರಾ ಸ್ಟೋರಿಯಲ್ಲಿ ಏನಿತ್ತು?
ತಮ್ಮ ಇನ್ ಸ್ಟಾ ಪುಟದಲ್ಲಿ ಬುಮ್ರಾ ಒಂದು ಖಾಲಿ ಗ್ಯಾಲರಿ ಹಾಗೂ ಇನ್ನೊಂದು ಪ್ರೇಕ್ಷಕರಿಂದ ಭರ್ತಿಯಾದ ಗ್ಯಾಲರಿಯ ಫೋಟೋ ಪ್ರಕಟಿಸಿ ಸಪೋರ್ಟ್ ವರ್ಸಸ್ ಕಂಗ್ರಾಜ್ಯುಲೇಷನ್ಸ್ ಎಂದು ಬರೆದುಕೊಂಡಿದ್ದರು. ಅಂದರೆ ಅದರ ಅರ್ಥ ಸೋತಾಗ ಯಾರೂ ಇರಲ್ಲ, ಗೆದ್ದಾಗ ಎಲ್ಲರೂ ಅಭಿನಂದಿಸುತ್ತಾರೆ ಎಂದಾಗಿತ್ತು. ಅಷ್ಟಕ್ಕೂ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಬೆನ್ನಲ್ಲೇ ಬುಮ್ರಾ ಯಾರನ್ನು ಉದ್ದೇಶಿಸಿ ಈ ಪೋಸ್ಟ್ ಹಾಕಿದರು ಎಂದು ಅಭಿಮಾನಿಗಳು ತಮ್ಮಲ್ಲೇ ಚರ್ಚಿಸಿಕೊಂಡಿದ್ದಾರೆ.

ಕೆಲವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೇಲಿನ ಅಸಮಾಧಾನವನ್ನು ಈ ರೀತಿ ಹೊರಹಾಕಿರಬಹುದು ಎಂದುಕೊಂಡಿದ್ದಾರೆ. ಮುಂಬೈ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು ಬುಮ್ರಾಗೆ ಕೊಂಚವೂ ಇಷ್ಟವಿಲ್ಲ. ಇದೀಗ ನಂ.1 ಸ್ಥಾನಕ್ಕೇರಿದ ಬೆನ್ನಲ್ಲೇ ಮುಂಬೈ ಬುಮ್ರಾಗೆ ಅಭಿನಂದಿಸಿ ಪೋಸ್ಟ್ ಹಾಕಿತ್ತು. ಇದಕ್ಕೇ ಬುಮ್ರಾ ಈ ರೀತಿ ಟಾಂಗ್ ಕೊಟ್ಟಿರಬಹುದೇ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಇಲ್ಲವೇ ಇದು ತಮ್ಮನ್ನು ಟೀಕಿಸುವ ಜನರಿಗೆ ನೀಡಿದ ಸಾಮಾನ್ಯ ಪ್ರತ್ಯುತ್ತರವಿರಬಹುದು ಎಂದೂ ಅಂದುಕೊಳ್ಳಬಹುದು. ಒಟ್ಟಿನಲ್ಲಿ ಬುಮ್ರಾ ಹಾಕಿದ ಒಂದು ಸ್ಟೋರಿ ಜನರ ತಲೆಯಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಂಗಾಪುರದಲ್ಲಿ ಐಸಿಸಿ ಎಜಿಎಂ: ಟಿ20 ವಿಶ್ವಕಪ್​ನಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಮಾಸ್ಟರ್‌ ಪ್ಲಾನ್‌

ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್: ಪಾಕ್‌ಗೆ ಭಾರತ ಶಾಕ್‌, ಇಂದು ನಡೆಯಬೇಕಿದ್ದ ಪಂದ್ಯ ರದ್ದು

ಲಾರ್ಡ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ: ಡಿಎಲ್‌ಎಸ್‌ ಆಧಾರದಲ್ಲಿ ಭಾರತವನ್ನು ಮಣಿಸಿದ ಇಂಗ್ಲೆಂಡ್‌ ವನಿತೆಯರು

ನಟಿ ಜಾಸ್ಮಿನ್ ವಾಲಿಯಾಗೆ ಗುಡ್‌ಬೈ ಹೇಳಿದ್ರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ: ಪುಷ್ಟಿ ನೀಡಿದ ಇಬ್ಬರ ನಡೆ

ಮತ್ತೊಂದು ವಿವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ, ಜಾಗಕ್ಕಾಗಿ ನೆರೆಹೊರೆಯರ ಜತೆ ಗುದ್ದಾಟ

ಮುಂದಿನ ಸುದ್ದಿ
Show comments