Select Your Language

Notifications

webdunia
webdunia
webdunia
webdunia

ಐಪಿಎಲ್: ಕನ್ನಡ ಹುಡುಗ ದೇವದತ್ತ ಪಡಿಕ್ಕಲ್ ಈ ಬಾರಿ ಆರ್ ಸಿಬಿಯ ಖಾಯಂ ಓಪನರ್?

ಐಪಿಎಲ್: ಕನ್ನಡ ಹುಡುಗ ದೇವದತ್ತ ಪಡಿಕ್ಕಲ್ ಈ ಬಾರಿ ಆರ್ ಸಿಬಿಯ ಖಾಯಂ ಓಪನರ್?
ಬೆಂಗಳೂರು , ಶನಿವಾರ, 30 ನವೆಂಬರ್ 2019 (10:06 IST)
ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ದೇವದತ್ತ ಪಡಿಕ್ಕಲ್ ಗೆ ಈ ಬಾರಿ ಐಪಿಎಲ್ ನಲ್ಲಿ ಅದೃಷ್ಟ ಖುಲಾಯಿಸಲಿದೆ.


ಕರ್ನಾಟಕ ಪರ ಅತ್ಯುತ್ತಮ ಆಟವಾಡುತ್ತಿರುವ ದೇವದತ್ತ ಪಡಿಕ್ಕಲ್ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ. ಆದರೆ ಕಳೆದ ಋತುವಿನಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಪಾರ್ಥಿವ್ ಪಟೇಲ್ ಬದಲಿಗೆ ದೇವದತ್ತ ಕೊಹ್ಲಿ ಜತೆಗೆ ಆರಂಭಿಕರಾಗುವ ಸುಳಿವನ್ನು ಆರ್ ಸಿಬಿ ನೀಡಿದೆ.

ತನ್ನ ಟ್ವಿಟರ್ ಪೇಜ್ ನಲ್ಲಿ ಪಾರ್ಥಿವ್ ಪಟೇಲ್ ಮತ್ತು ದೇವದತ್ತ ಪಡಿಕ್ಕಲ್ ಫೋಟೋ ಪ್ರಕಟಿಸಿ ಬೃಹತ್ ಮೊತ್ತ ಚೇಸ್ ಮಾಡುವ ಇವರಿಬ್ಬರಲ್ಲಿ ಯಾರು ಆರಂಭಿಕರಾಗಿ ಇರಬೇಕೆಂದು ಬಯಸುತ್ತೀರಿ ಎಂದು ಆರ್ ಸಿಬಿ ಪ್ರಶ್ನಿಸಿದೆ. ಹೀಗಾಗಿ ಈ ಋತುವಿನಲ್ಲಿ ಕರ್ನಾಟಕದ ಹುಡುಗನಿಗೆ ಅದೃಷ್ಟ ಖುಲಾಯಿಸುವುದು ಖಂಡಿತಾ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಸಾಹಸ: ಸೈಯದ್ ಮುಷ್ತಾಕ್ ಟೂರ್ನಿ ಫೈನಲ್ ಗೆ ಕರ್ನಾಟಕ