Webdunia - Bharat's app for daily news and videos

Install App

IPL 2025 RCB vs KKR: ಈ ಸಲ ಆರ್ ಸಿಬಿ ಚಾಂಪಿಯನ್ ಆಗಬಹುದು ಎನ್ನುವುದಕ್ಕೆ ಮೂರು ಕಾರಣ

Krishnaveni K
ಶನಿವಾರ, 22 ಮಾರ್ಚ್ 2025 (12:47 IST)
ಬೆಂಗಳೂರು: ಐಪಿಎಲ್ 2025 ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಆರ್ ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಸಲ ಆರ್ ಸಿಬಿ ಕಪ್ ಗೆಲ್ಲಬಹುದು ಎನ್ನುವುದಕ್ಕೆ ಮೂರು ಕಾರಣಗಳು ಇಲ್ಲಿವೆ ನೋಡಿ.

ನಾಯಕತ್ವ ಬದಲಾವಣೆ
ಇಷ್ಟು ದಿನ ಆರ್ ಸಿಬಿ ಹಿರಿಯ ಅನುಭವಿಗಳಿಗೇ ನಾಯಕತ್ವ ನೀಡಿತ್ತು. ಇದೀಗ ಯುವ, ಉತ್ಸಾಹೀ ನಾಯಕನನ್ನು ಆಯ್ಕೆ ಮಾಡಿದೆ. ರಜತ್ ಪಾಟೀದಾರ್ ನಾಯಕರಾಗಿ ಹೆಚ್ಚು ಅನುಭವವಿಲ್ಲದೇ ಇರಬಹುದು. ಆದರೆ ಐಪಿಎಲ್ ನಲ್ಲಿ ಯುವ ನಾಯಕರು ಮಿಂಚಿದ ಹಲವು ಉದಾಹರಣೆಗಳಿವೆ. ಹೀಗಾಗಿ ರಜತ್ ಮೇಲೂ ವಿಶ್ವಾಸವಿದೆ.

ಆಲ್ ರೌಂಡರ್ ಗಳ ಬಲ
ಈ ಬಾರಿ ಆರ್ ಸಿಬಿ ತಂಡದಲ್ಲಿ ಸಾಕಷ್ಟು ಆಲ್ ರೌಂಡರ್ ಗಳಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಗಳೇ ಹೆಚ್ಚು ಉಪಯುಕ್ತವಾಗುತ್ತಾರೆ. ಹೀಗಾಗಿ ಈ ಬಾರಿ ಕೃನಾಲ್ ಪಾಂಡ್ಯ, ಲಿವಿಂಗ್ ಸ್ಟೋನ್, ಮೋಹಿತ್ ರಾಠೀ, ಸ್ವಪ್ನಿಲ್ ಸಿಂಗ್ ಸೇರಿದಂತೆ ಈ ಮಾದರಿಗೆ ಹೇಳಿ ಮಾಡಿಸಿದ ಆಲ್ ರೌಂಡರ್ ಗಳಿದ್ದಾರೆ.

ವಿರಾಟ್ ಕೊಹ್ಲಿ ಛಲ
ಕಳೆದ 17 ಸೀಸನ್ ಗಳಲ್ಲಿ ಆಡಿಯೂ ಆರ್ ಸಿಬಿಗೆ ಒಂದು ಕಪ್ ಗೆದ್ದುಕೊಡಲು ಸಾಧ್ಯವಾಗಿಲ್ಲ ಎನ್ನುವ ಬೇಸರ ವಿರಾಟ್ ಕೊಹ್ಲಿಯಲ್ಲಿದೆ. ಈ ಬಾರಿ ರಜತ್ ನಾಯಕತ್ವದಲ್ಲಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜೊತೆಗೆ ಮುಂದೆ ಅವರು ಐಪಿಎಲ್ ಅಡುತ್ತಾರೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಈ ಬಾರಿಯಾದರೂ ಕಪ್ ಗೆದ್ದು ಕೊಡುತ್ತಾರೆ ಎಂಬ ವಿಶ್ವಾಸವಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments