ಭಾರತ ಕ್ರಿಕೆಟ್ ತಂಡದ ನೂತನವಾಗಿ ನೇಮಕವಾದ ಹೆಡ್ ಕೋಚ್ ಅನಿಲ್ ಕುಂಬ್ಳೆ, ಆಟದ ಸುದೀರ್ಘ ಮಾದರಿಯಲ್ಲಿ ಬ್ಯಾಟ್ಸ್ಮನ್ಗಳಿಗೆ ಬೋರಿಂಗ್ ಅಸ್ತ್ರ ಪ್ರಯೋಗಿಸುವುದು ಯಾವುದೇ ತಂಡಕ್ಕೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಗುಡ್ ಲೆಂಗ್ತ್ ಎಸೆತಗಳನ್ನು ಸತತವಾಗಿ ಎಸೆದು ಬ್ಯಾಟ್ಸ್ಮನ್ಗಳಿಗೆ ಬೋರ್ ಹೊಡೆಸುವ ಮೂಲಕ ಔಟ್ ಮಾಡುವುದು ಬೋರಿಂಗ್ ತಂತ್ರವಾಗಿದೆ ಎಂದು ಹೇಳಿದರು. ಭಾರತ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಜುಲೈ 21ರಿಂದ ಆಡಲಿದೆ.
ವೆಸ್ಟ್ ಇಂಡೀಸ್ನಲ್ಲಿ ಭಾರತದ ಅತ್ಯಧಿಕ ವಿಕೆಟ್ ಕಬಳಿಸಿದ ಕುಂಬ್ಳೆ, 30 ಸೆಕೆಂಡುಗಳ ವಿಡಿಯೊ ಪ್ರತಿಕ್ರಿಯೆಗಳ ಮೂಲಕ ಅಭಿಮಾನಿಗಳಿಗೆ ಉತ್ತರಿಸಿದ್ದಾರೆ. ಬಿಸಿಸಿಐ ಅಧಿಕೃತ ಟ್ವಿಟರ್ನಲ್ಲಿ ಈ ಸೆಷನ್ ನಿರ್ವಹಿಸಲಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನಾವು ಕಿರು ಮಾದರಿಯಿಂದ ಸುದೀರ್ಘ ಮಾದರಿಗೆ ಮನಸ್ಥಿತಿಯನ್ನು ಬದಲಾಯಿಸಲು ನೋಡಿದ್ದೇವೆ ಎಂದು ಭಾರತ ಯಾವುದರತ್ತ ಗಮನಹರಿಸಿದೆ ಎಂದು ಕೇಳಿದಾಗ ಕುಂಬ್ಳೆ ಹೇಳಿದರು.
ಬೌಲಿಂಗ್ ದೃಷ್ಟಿಕೋನದಿಂದ ಗುಡ್ ಲೆಂಗ್ತ್ ಎಸೆತಗಳನ್ನು ಸತತವಾಗಿ ಹಾಕಿ ಬಾಟ್ಸ್ಮನ್ಗಳಿಗೆ ಬೇಸರ ಬರಿಸುವುದು. ಟೆಸ್ಟ್ ಕ್ರಿಕೆಟ್ನಲ್ಲಿ ಆಟಗಾರ ಅದನ್ನು ಮಾಡುವುದು ಅಗತ್ಯವಾಗಿದೆ. ಫೀಲ್ಡಿಂಗ್ನಲ್ಲಿ ಕ್ಯಾಚ್ ಹಿಡಿಯುವುದರತ್ತ ಗಮನಹರಿಸಬೇಕು ಎಂದು ಕುಂಬ್ಳೆ ವಿಶ್ಲೇಷಿಸಿದರು.
ಟೆಸ್ಟ್ ಮತ್ತು ಏಕದಿನಗಳಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿರುವ ಕುಂಬ್ಳೆ, ಅಭ್ಯಾಸ ಪಂದ್ಯಗಳ ರೀತಿಯಲ್ಲಿ ಪಿಚ್ ನಿಧಾನಗತಿಯಲ್ಲಿದ್ದರೆ, ಸರಣಿ ಗೆಲ್ಲಬೇಕಾದರೆ ಸ್ಪಿನ್ನರ್ಗಳು ದೊಡ್ಡ ಪಾತ್ರವನ್ನು ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಸ್ಪಿನ್ನರ್ಗಳು ಮತ್ತು ವೇಗಿಗಳು ಸಮಾನ ಪಾತ್ರ ವಹಿಸಬೇಕು. ವೆಸ್ಟ್ ಇಂಡೀಸ್ನಲ್ಲಿ ವಿಕೆಟ್ಗಳು ನಿಧಾನಗತಿಯಲ್ಲಿದ್ದು, ಅಶ್ವಿನ್, ಜಡೇಜಾ, ಅಮಿತ್ ಮಿಶ್ರಾ ಅವರು ನಾವು ಟೆಸ್ಟ್ ಸರಣಿ ಗೆಲ್ಲುವುದಕ್ಕೆ ಪ್ರಮುಖ ಪಾತ್ರ ವಹಿಸಬೇಕು ಎಂದು ಕುಂಬ್ಳೆ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.