ಆಡಿಸಿದರೂ, ಕಾಡಿಸಿದರೂ ಬೀಳದ ಹನುಮ-ರವಿಚಂದ್ರನ್ ಅಶ್ವಿನ್: ಟೆಸ್ಟ್ ಪಂದ್ಯ ಡ್ರಾ

Webdunia
ಸೋಮವಾರ, 11 ಜನವರಿ 2021 (12:49 IST)
ಸಿಡ್ನಿ: ಒಂದೆಡೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ. ಇನ್ನೊಂದೆಡೆ ಆಸ್ಟ್ರೇಲಿಯನ್ ಕ್ರಿಕೆಟಿಗರಿಂದ ಆನ್ ಫೀಲ್ಡ್ ನಲ್ಲಿ ಸ್ಲೆಡ್ಜಿಂಗ್. ಮತ್ತೊಂದೆಡೆ ಗಾಯಗಳ ಸರಮಾಲೆ. ಇವೆಲ್ಲಾ ಹತಾಶೆಯನ್ನು ಆಟದ ಮೂಲಕ ತೋರಿಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಸೋಲಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಅಂತಿಮ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಿನ್ನೆ 98 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ದಿನದಾಟ ಕೊನೆಗೊಂಡಿದ್ದಾಗ ಭಾರತ ಇಂದು ಸುಲಭವಾಗಿ ಸೋಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದರಲ್ಲೂ ಡ್ರಾ ಮಾಡಿಕೊಳ್ಳಬಹುದೆಂದು ಯಾರೂ ಕನಸಲ್ಲೂ ಊಹಿಸಿರಲಿಲ್ಲ.

ಆದರೆ ಇದೆಲ್ಲವೂ ಸಾಧ್ಯವಾಗಿದ್ದು ರಿಷಬ್ ಪಂತ್-ಚೇತೇಶ್ವರ ಪೂಜಾರ ಮತ್ತು ರವಿಚಂದ್ರನ್ ಅಶ್ವಿನ್-ಹನುಮ ವಿಹಾರಿ ನಡುವಿನ ಜೊತೆಯಾಟದಿಂದ. ಅದರಲ್ಲೂ ರಿಷಬ್ ಆಡುವಾಗ ಭಾರತ ಜಯ ಗಳಿಸಬಹುದೆಂಬ ಆಸೆ ಚಿಗುರಿತ್ತು. ಆದರೆ ಅವರ ವಿಕೆಟ್ ಬಿದ್ದಾಗ ಭಾರತ ಮತ್ತೆ ಸೋಲಿನ ಭೀತಿಗೆ ಸಿಲುಕಿತ್ತು.

ಈ ವೇಳೆ ಜೊತೆಯಾದ ರವಿಚಂದ್ರನ್  ಅಶ್ವಿನ್-ಹನುಮ ವಿಹಾರಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಲ್ಲಿಯವರೆಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪಂದ್ಯ ಡ್ರಾದತ್ತ ಸಾಗಿತು. ಅದರಲ್ಲೂ ಹನುಮ ವಿಹಾರಿ ಬರೋಬ್ಬರಿ 161 ಎಸೆತ ಎದುರಿಸಿದರೆ ಗಳಿಸಿದ್ದು ಬರೀ 23 ರನ್! ಗಾಯದಿಂದಾಗಿ ಅವರಿಗೆ ಓಡಿ ರನ್ ಗಳಿಸುವುದು ಕಷ್ಟವಾಗಿತ್ತು. ಹಾಗಿದ್ದರೂ ಡಿಫೆಂಡಿಂಗ್ ಶಾಟ್ ಮೂಲಕ ಎದುರಾಳಿಗಳನ್ನು ಕಾಡಿದರು. ಇವರಿಗೆ ತಕ್ಕ ಸಾಥ್ ನಿಭಾಯಿಸಿದ್ದು ಅಶ್ವಿನ್. ಎರಡು ಬಾರಿ ಜೀವದಾನ ಪಡೆದ ಅಶ್ವಿನ್ 128 ಎಸೆತ ಎದುರಿಸಿ 39 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯವರೆಗೂ ವಿಕೆಟ್ ಬಿಟ್ಟುಕೊಡದೇ ಕೇವಲ ಒಂಟಿ ರನ್ ಗಳಿಸಿ ದಿನದಾಟ ಮುಗಿಸಿದ ಇಬ್ಬರಿಗೂ ಕೊನೆಗೊಂದು ಕಿರುನಗೆಯೊಂದಿಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಬ್ಬಾ ಕೊಹ್ಲಿ ಬೆನ್ನು ತಟ್ಟಿದರೂ ಇಷ್ಟೊಂದು ಆಟಿಟ್ಯೂಡ್ ತೋರಿಸ್ತಾರಾ ಹರ್ಪ್ರೀತ್ ಬ್ರಾರ್ Video

IPL 2026: ಪಂಜಾಬ್‌ ವಿರುದ್ಧ ಗೆದ್ದು ಪ್ಲೇ–ಆಫ್‌ಗೆ ಲಗ್ಗೆ ಹಾಕಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS PBKS: ಟಾಸ್‌ ಗೆದ್ದ ಪಂಜಾಬ್‌, ಬೌಲಿಂಗ್ ಆಯ್ಕೆ

ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಿದಳು: ಪತ್ನಿ ಅನುಷ್ಕಾ ತಂದ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಮಾತು

IPL 2026: ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ ಇಂದು ಮಹತ್ವದ ಪಂದ್ಯ: ಗೆದ್ದರೆ ಪ್ಲೇಆಫ್‌ ಸ್ಥಾನ ಫಿಕ್ಸ್‌

ಮುಂದಿನ ಸುದ್ದಿ
Show comments