Webdunia - Bharat's app for daily news and videos

Install App

ಬೌಲರುಗಳಿಗಿಂತ ಟಿ 20 ಯಲ್ಲಿ ಬ್ಯಾಟ್ಸ್‌ಮನ್ ಸುಧಾರಣೆ: ರಾಹುಲ್ ದ್ರಾವಿಡ್

Webdunia
ಶುಕ್ರವಾರ, 15 ಜುಲೈ 2016 (19:51 IST)
ಟಿ 20 ಕ್ರಿಕೆಟ್ ಕಳೆದ ದಶಕದಿಂದ ಪರಿವರ್ತನೆಯ ಹಂತವನ್ನು ಮುಟ್ಟಿದ್ದು, ಬೌಲರ್‌ಗಳಿಗೆ ಹೋಲಿಕೆ ಮಾಡಿದರೆ ಬ್ಯಾಟ್ಸ್‌ಮನ್‌ಗಳು ಸುಧಾರಣೆಯ ಹೆಚ್ಚು ಲಕ್ಷಣಗಳನ್ನು ತೋರಿಸಿದ್ದಾರೆ ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾವಿಸಿದ್ದಾರೆ.
 
ಕ್ರಿಕ್ ಇನ್ಫೋದ ಟಾಕಿಂಗ್ ಕ್ರಿಕೆಟ್ ಜತೆ ಮಾತನಾಡುತ್ತಿದ್ದ ದ್ರಾವಿಡ್ ಕಿರು ಓವರುಗಳ ಮಾದರಿ ಕ್ರಿಕೆಟ್ ಆಟಗಾರರ ಮೇಲೆ ಉಂಟುಮಾಡಿದ ಪರಿಣಾಮವನ್ನು ಕುರಿತು ಹೇಳಿದರು.
 
ಟಿ 20 ಕ್ರಿಕೆಟ್‌ನಲ್ಲಿ ಕಳೆದ 9, 10, 11 ವರ್ಷಗಳಲ್ಲಿ ಕೌಶಲ್ಯ ವೃದ್ಧಿಗೆ ಸಂಬಂಧಿಸಿದಂತೆ ಬ್ಯಾಟ್ಸ್‌ಮನ್‌ಗಳು ಬೌಲರುಗಳಿಗಿಂತ ಸ್ವಲ್ಪ ಮುಂದಿದ್ದಾರೆ. ಬೌಲರುಗಳು ನಿಧಾನವಾಗಿ ಸುಧಾರಿಸುತ್ತಿದ್ದಾರೆ ಎಂದು ದ್ರಾವಿಡ್ ನುಡಿದರು. 
 
ಬೌಲರುಗಳ ಆಟ ವಿಕಾಸ ಹೊಂದುತ್ತಿದ್ದಂತೆ ಎದುರಿಸಿದ ಅಡಚಣೆಗಳೇನು ಎಂದು ದ್ರಾವಿಡ್ ವಿವರಿಸಿದರು. ಬೌಲಿಂಗ್ ಸಹಜಗುಣ ಹೇಗಿರುತ್ತದೆಂದರೆ ನೀವು ದೈಹಿಕವಾಗಿ ಮಿತಿಯಲ್ಲಿರುತ್ತೀರಿ. ನೀವು 2 ಗಂಟೆಗಳು, ಎರಡೂವರೆ, ಮೂರು ಗಂಟೆಗಳ ಕಾಲ ಪ್ರತಿದಿನವೂ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನೀವು ಗಾಯಗೊಳ್ಳಬಹುದು ಅಥವಾ ದಣಿವಾಗಬಹುದು ಎಂದು ವಿವರಿಸಿದರು.
 
ಆದ್ದರಿಂದ ಕೌಶಲ್ಯ ವೃದ್ಧಿಗೆ ಬೌಲರುಗಳಿಗೆ ಅವಕಾಶಗಳು ದೈಹಿಕವಾಗಿ ಮಿತಿಯಲ್ಲಿರುತ್ತದೆ. ಆದರೆ ಬೌಲರುಗಳಿಗಿಂತ ಬ್ಯಾಟ್ಸ್‌ಮನ್‌ಗಳು ದೈಹಿಕವಾಗಿ ಹೆಚ್ಚು ಸಮಯ ಆಡಬಲ್ಲರು ಎಂದು ದ್ರಾವಿಡ್ ವಿವರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

 

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments