Webdunia - Bharat's app for daily news and videos

Install App

ಬಿಸಿಸಿಐಗೆ ಕ್ಯಾರೇ ಎನ್ನದೆ ಹೊಸ ಹಣಕಾಸು ನೀತಿ ರೂಪಿಸಲು ಹೊರಟ ಐಸಿಸಿ! ಇನ್ನೇನು ಕಾದಿದೆಯೋ?

Webdunia
ಭಾನುವಾರ, 5 ಫೆಬ್ರವರಿ 2017 (07:30 IST)
ದುಬೈ:  ಐಸಿಸಿಯಲ್ಲಿ ಎಲ್ಲವೂ ಬಿಸಿಸಿಐ ಹೇಳದಂತೆ ನಡೆಯೋಲ್ಲ. ನೀವೇನು ಮಾಡ್ತೀರೋ ಮಾಡಿಕೊಳ್ಳಿ. ನಾವು ಮಾಡೋದನ್ನು ಮಾಡಿಯೇ ತೀರುತ್ತೇವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಗೆ ತಿರುಗೇಟು ನೀಡಲು ಐಸಿಸಿ ಸಜ್ಜಾಗಿದೆ.

 
ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ವಿರೋಧದ ಹೊರತಾಗಿಯೂ ಹೊಸ ಹಣಕಾಸು ನೀತಿಗೆ ಅಂಕಿತ ಹಾಕಲು ಹೊರಟಿದೆ. ಹೊಸ ಹಣಕಾಸು ನೀತಿಯಿಂದ ಬಿಸಿಸಿಐ ಜೇಬಿಗೆ ಕತ್ತರಿ ಬೀಳಬಹುದೆಂದು ಇದಕ್ಕೆ ಅದು ತೀವ್ರ ವಿರೋಧ ಮಾಡುತ್ತಲೇ ಬಂದಿತ್ತು.

ಆದರೆ ಇದಕ್ಕೆ ಸೊಪ್ಪು ಹಾಕದೇ ತನ್ನದೇ ಹಾದಿಯಲ್ಲಿ ನಡೆಯಲು ಭಾರತದ ಶಶಾಂಕ್ ಮನೋಹರ್ ನೇತೃತ್ವದ ಐಸಿಸಿ ತೀರ್ಮಾನಿಸಿದೆ. ಐಸಿಸಿ ಸಭೆಯಲ್ಲಿ ಬಹುತೇಕ ಸದಸ್ಯರು ಹೊಸ ಹಣಕಾಸು ವಿಧೇಯಕದ ಪರ ಮತ ಹಾಕಿದ್ದಾರೆ. ಇದರಿಂದಾಗಿ ಐಸಿಸಿಗೆ ಆನೆ ಬಲ ಬಂದಂತಾಗಿದೆ. ಆದರೆ ನಿರೀಕ್ಷೆಯಂತೆ ಹೊಸದಾಗಿ ನೇಮಕಗೊಂಡ ಬಿಸಿಸಿಐ ಆಡಳಿತ ಮಂಡಳಿ ಪ್ರತಿನಿಧಿ ವಿಕ್ರಮ್ ಲಿಮಾಯೆ ಇದಕ್ಕೆ ವಿರುದ್ಧವಾಗಿ ಮತ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

ಈಗಾಗಲೇ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರಮುಖ ಟೂರ್ನಿಗಳನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ. ಅತ್ತ ಐಸಿಸಿ ತೀರ್ಮಾನದ ಪೂರ್ಣ ಪ್ರಮಾಣದ ಪ್ರತಿ ಓದಿದ ನಂತರ ಮುಂದಿನ ಕ್ರಮದ ಬಗ್ಗೆ ಚಿಂತಿಸುವುದಾಗಿ ಲಿಮಾಯೆ ಹೇಳಿಕೊಂಡಿದ್ದಾರೆ. ಅಂತೂ ಭಾರತದ ಅಭಿಮಾನಿಗಳಿಗಂತೂ ಗಂಡಾಂತರ ಕಾದಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

ಮುಂದಿನ ಸುದ್ದಿ
Show comments