Webdunia - Bharat's app for daily news and videos

Install App

ಬಿಸಿಸಿಐ ವಿರುದ್ಧ ವಾರ್ ಡಿಕ್ಲೇರ್ ಮಾಡಲು ವಿದೇಶಿ ಕಾನೂನು ಪ್ರತಿನಿಧಿಗಳ ಮೊರೆ ಹೋದ ಕ್ರಿಕೆಟಿಗ ಶ್ರೀಶಾಂತ್

Webdunia
ಭಾನುವಾರ, 5 ಫೆಬ್ರವರಿ 2017 (07:25 IST)
ನವದೆಹಲಿ:  ಕೇರಳದ ಕ್ರಿಕೆಟಿಗ ಶ್ರೀಶಾಂತ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾದ ಮೇಲೆ ಅವಕಾಶ ನಿರೀಕ್ಷೆಯಲ್ಲಿ ಬಿಸಿಸಿಐ ಬಾಗಿಲು ತಟ್ಟಿ ನಿರಾಸೆಗೊಂಡಿದ್ದರು. ಹೀಗಾಗಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

 
ದೆಹಲಿ ಕೋರ್ಟ್ ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಿಂದ ಮುಕ್ತಗೊಳಿಸಿದ ನಂತರ ಸ್ಕಾಟ್ ಲೆಂಡ್ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿ ಶ್ರೀಶಾಂತ್ ಪತ್ರ ಬರೆದಿದ್ದರು. ಆದರೆ ಭಾರತ ಕ್ರಿಕೆಟ್ ಮಂಡಳಿ ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿತು.

ನಂತರ ಮಾಧ್ಯಮಗಳ ಮುಂದೆ ಬಂದ ಶ್ರೀಶಾಂತ್ ದೆಹಲಿ ಪೊಲೀಸರು ತಮಗೆ ನೀಡಿದ ಕಿರುಕುಳದ ಬಗ್ಗೆ ವಿವರಿಸಿದ್ದರು. ಅಲ್ಲದೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಜತೆಗೆ ಟ್ವಿಟರ್ ನಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಇದರ ಬೆನ್ನಲ್ಲೇ ಶ್ರೀಶಾಂತ್ ಇದೀಗ ಕಾನೂನು ಸಮರಕ್ಕೆ ಮುಂದಾಗಿರುವ ಸುದ್ದಿ ಬಂದಿದೆ.

ಇದಕ್ಕಾಗಿ ಬ್ರಿಟನ್ ಮತ್ತು ಸ್ವಿಜರ್ ಲ್ಯಂಡ್ ನಲ್ಲಿರುವ ಕಾನೂನು ತಜ್ಞರೊಂದಿಗೆ ಸಮಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.  ಬಿಸಿಸಿಐ ಶ್ರೀಶಾಂತ್ ಮನವಿಗೆ ಕಿಮ್ಮತ್ತು ನೀಡದ ಕಾರಣ ಕಾನೂನು ಹೋರಾಟ ಮಾಡಿ ತಮಗೆ ಬೇಕಾಗಿದ್ದನ್ನು ಪಡೆಯದೇ ಅವರಿಗೆ ಬೇರೆ ವಿಧಿಯಿಲ್ಲ ಎಂದು ಮೂಲಗಳು ಹೇಳಿವೆ. ಇದೆಲ್ಲಾ ಎಲ್ಲಿಗೆ ಬಂದು ತಲುಪುತ್ತದೋ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

ಮುಂದಿನ ಸುದ್ದಿ
Show comments