Webdunia - Bharat's app for daily news and videos

Install App

ಮೈದಾನದಲ್ಲಿ ಅಶಿಸ್ತು ತೋರುವ ಆಟಗಾರರನ್ನು ಹೊರದಬ್ಬಲು ಶಿಫಾರಸ್ಸು ಮಾಡಿದ ಐಸಿಸಿ ತಾಂತ್ರಿಕ ಸಮಿತಿ

Webdunia
ಶುಕ್ರವಾರ, 26 ಮೇ 2017 (10:20 IST)
ದುಬೈ: ಮೈದಾನದಲ್ಲಿ ಗಂಭೀರ ಅಶಿಸ್ತು ತೋರಿದ ಕ್ರಿಕೆಟಿಗರನ್ನು ಆಟದ ನಡುವೆಯೇ ಮೈದಾನದಿಂದ ಹೊರ ಹಾಕುವ ಶಿಕ್ಷೆ ನೀಡುವ ನಿಯಮಕ್ಕೆ ಐಸಿಸಿಯ ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ.

 
ಲಂಡನ್ ನಲ್ಲಿ ಸಭೆ ಸೇರಿದ ಅನಿಲ್ ಕುಂಬ್ಳೆ ನೇತೃತ್ವದ ತಾಂತ್ರಿಕ ಸಮಿತಿ ಹಲವಾರು ಹೊಸ ನಿಯಮಗಳನ್ನು ಶಿಫಾರಸ್ಸು ಮಾಡಿದೆ. ಇದರಲ್ಲಿ ಎಲ್ಲಾ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಡಿಆರ್ ಎಸ್ ನಿಯಮಗಳನ್ನು ಜಾರಿ ಮಾಡಬೇಕು ಎಂದೂ ಶಿಫಾರಸ್ಸು ಮಾಡಿದೆ.

ಇದಲ್ಲದೆ ಕ್ರಿಕೆಟ್ ನ ಹಲವು ನಿಯಮಗಳಿಗೆ ಸುಧಾರಣೆ ತರಲು ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ. ಅದರಲ್ಲಿ ಆಟಗಾರರು ಮೈದಾನದಲ್ಲಿ ಹಿಂಸಾತ್ಮಕ ವರ್ತನೆ ತೋರಿದರೆ ಅವರನ್ನು ಮೈದಾನದಿಂದ ಹೊರ ಹಾಕಲು ಅಂಪಾಯರ್ ಗಳಿಗೆ ಅಧಿಕಾರ ನೀಡುವುದೂ ಸೇರಿದೆ.

ಇದರ ಜತೆಗೆ ಬ್ಯಾಟ್ ನ ಗಾತ್ರ ಎಷ್ಟಿರಬೇಕು ಎನ್ನುವುದರ ಬಗ್ಗೆಯೂ ಹಲವು ನಿಯಮಾವಳಿಗಳನ್ನು ಶಿಫಾರಸ್ಸು ಮಾಡಿದೆ. ಒಂದು ವೇಳೆ ಐಸಿಸಿ ಕಾರ್ಯಕಾರಿ ಸಮಿತಿ ಇದನ್ನು ಅನುಮೋದಿಸಿದರೆ ಮುಂದಿನ ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಮುಂದಿನ ಸುದ್ದಿ
Show comments