ಲಂಡನ್: ಭಾರತ ತಂಡದ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿರುವುದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿರುವುದರ ಹಿಂದೆ ಅಚ್ಚರಿಯೇನೂ ಇಲ್ಲ. ಕೋಚ್ ಹುದ್ದೆಗೆಯ ಗುತ್ತಿಗೆ ಒಂದು ವರ್ಷದ್ದಾಗಿತ್ತು. ಅದರಂತೆ ಒಂದು ವರ್ಷ ಕಳೆದ ಕಾರಣ ಅರ್ಜಿ ಆಹ್ವಾನಿಸಲಾಗಿದೆಯಷ್ಟೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಹಾಗಿದ್ದರೆ, ಟೀಂ ಇಂಡಿಯಾ ಯಶಸ್ಸಿನಲ್ಲಿ ಕೋಚ್ ನ ಪಾತ್ರವಿಲ್ಲವೇ ಎಂದು ಕೇಳಿದಾಗ ‘ಒಂದು ತಂಡ ಒಬ್ಬರಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ತಂಡದ ಯಶಸ್ಸಿಗೆ ಎಲ್ಲರೂ ಸಮ ಪಾಲುದಾರರು’ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಹಾಗಿದ್ದರೆ ಕೋಚ್ ಆಗಿ ಕುಂಬ್ಳೆ ಮುಂದುವರಿಯಲಿ ಎಂದು ಕೊಹ್ಲಿ ಹೇಳಿಲ್ಲವೇಕೆ ಎನ್ನುವುದೇ ಅಭಿಮಾನಿಗಳ ಪ್ರಶ್ನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ