Select Your Language

Notifications

webdunia
webdunia
webdunia
webdunia

ಕರುಣ್ ಮೇಲೆ ಕರುಣೆ ತೋರಿದ ಟೀಂ ಇಂಡಿಯಾ

ಕರುಣ್ ಮೇಲೆ ಕರುಣೆ ತೋರಿದ ಟೀಂ ಇಂಡಿಯಾ
Bangalore , ಶನಿವಾರ, 4 ಮಾರ್ಚ್ 2017 (09:18 IST)
ಬೆಂಗಳೂರು: ತವರು ನೆಲದಲ್ಲಿ ಆಡುವ ಕರುಣ್ ನಾಯರ್ ಕನಸು ನನಸಾಗಲಿದೆ. ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಕೊನೆಗೂ ತವರಿನ ಹುಡುಗನ ಮೇಲೆ ಕರುಣೆ ತೋರಿದೆ.


ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಪಂದ್ಯಕ್ಕೆ ಕರುಣ್ ನಾಯರ್ ಅಂತಿಮ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತವರಿನ ಹುಡುಗರಾದ ಕೆಎಲ್ ರಾಹುಲ್ ಮತ್ತು ಕರುಣ್ ಇಬ್ಬರ ಆಟವನ್ನೂ ಕಣ್ತುಂಬಿಕೊಳ್ಳುವ ಅವಕಾಶ ತವರಿನ ಅಭಿಮಾನಿಗಳಿಗೆ.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತದ ಪರ ಈ ಪಂದ್ಯದಲ್ಲಿ ಎರಡು ಬದಲಾವಣೆಗಳಿವೆ. ಮುರಳಿ ವಿಜಯ್ ಬದಲಿಗೆ ಅಭಿನವ್ ಮುಕುಂದ್ ಆರಂಭಿಕರಾಗಲಿದ್ದಾರೆ. ಜಯಂತ್ ಯಾದವ್ ಬದಲಿಗೆ ಕರುಣ್ ನಾಯರ್ ಗೆ ಸ್ಥಾನ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಅಟೋವಾಲನಾದ ಮೈಕಲ್ ಕ್ಲಾರ್ಕ್ (ವಿಡಿಯೋ )