Webdunia - Bharat's app for daily news and videos

Install App

ಲೇಟಾಗಿ ಬರುವವರಿಗೆ ಟೀಂ ಇಂಡಿಯಾದಲ್ಲಿ ಧೋನಿ ಕೊಡುತ್ತಿದ್ದ ಶಿಕ್ಷೆಯೇನು ಗೊತ್ತಾ?

Webdunia
ಗುರುವಾರ, 16 ಮೇ 2019 (08:32 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಧೋನಿ ತಾವು ನಾಯಕರಾಗಿದ್ದಾಗ ಪ್ರಾಕ್ಟೀಸ್ ಗೆ ಲೇಟಾಗಿ ಬರುವವರಿಗೆ ವಿಶಿಷ್ಟ ಶಿಕ್ಷೆ ನೀಡುತ್ತಿದ್ದರಂತೆ.


ಈ ಬಗ್ಗೆ ಭಾರತದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಬರದ ಆಟಗಾರರಿಗೆ ಏನಾದರೂ ಶಿಕ್ಷೆ ಕೊಡೋಣವೇ ಎಂದು ಮೊದಲು ಟೆಸ್ಟ್ ತಂಡದಲ್ಲಿ ಚರ್ಚೆಯಾಯಿತು. ಆಗ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಏಕದಿನಕ್ಕೆ ಧೋನಿ ನಾಯಕರಾಗಿದ್ದರು.

ಟೆಸ್ಟ್ ತಂಡದಲ್ಲಿ ಲೇಟಾಗಿ ಬರುವ ಆಟಗಾರರಿಗೆ 10 ಸಾವಿರ ರೂ. ದಂಡ ವಿಧಿಸೋಣ ಎಂದು ನಾಯಕ ಕುಂಬ್ಳೆ ಸಲಹೆ ನೀಡಿದರು. ಅದರಂತೆ ಟೆಸ್ಟ್ ತಂಡದಲ್ಲಿ ಆ ಶಿಕ್ಷೆ ಜಾರಿಯಾಯಿತು. ನಂತರ ಏಕದಿನ ತಂಡದಲ್ಲೂ ಇದೇ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಯಿತು. ಆಗ ನಾಯಕ ಧೋನಿ ಅದಕ್ಕೆ ಸಣ್ಣ ಟ್ವಿಸ್ಟ್ ನೀಡಿದರು.

ಲೇಟಾಗಿ ಬರುವ ಆಟಗಾರನಿಗೆ ಮಾತ್ರವಲ್ಲ, ಒಬ್ಬ ಆಟಗಾರ ಲೇಟ್ ಆದರೆ ಎಲ್ಲಾ ಆಟಗಾರರೂ 10 ಸಾವಿರ ದಂಡ ತೆರಬೇಕು ಎಂದು ಧೋನಿ ಸಲಹೆ ನೀಡಿದರು. ಅದರಂತೆ ಆ ಶಿಕ್ಷೆ ಜಾರಿಯಾಯಿತು. ಆ ಬಳಿಕ ಯಾರೂ ಕೂಡಾ ಏಕದಿನ ತಂಡದಲ್ಲಿ ಪ್ರಾಕ್ಟೀಸ್ ಗೆ ಲೇಟ್ ಆಗಿ ಬರುತ್ತಿರಲಿಲ್ಲ ಎಂದು ಪ್ಯಾಡಿ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

ಮುಂದಿನ ಸುದ್ದಿ
Show comments