ಎಂದೂ ಅಳದ ಧೋನಿ ಮಾತನಾಡುತ್ತಾ ಭಾವುಕರಾಗಿದ್ದು ಯಾಕೆ?

Webdunia
ಶನಿವಾರ, 31 ಮಾರ್ಚ್ 2018 (07:54 IST)
ಚೆನ್ನೈ: ಧೋನಿ ಸಾಮಾನ್ಯವಾಗಿ ತಮ್ಮ ಭಾವನೆಯನ್ನು ಬಹಿರಂಗವಾಗಿ ಹೊರ ಹಾಕುವವರಲ್ಲ. ಆದರೆ ನಿನ್ನೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಭಾವುಕರಾದರು.

ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಧೋನಿ ಮರಳುತ್ತಿದ್ದಾರೆ. ಈ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ ‘ನಾನು ಭಾರತ ತಂಡ ಮತ್ತು ಜಾರ್ಖಂಡ್ ಪರ ಹಲವು ಪಂದ್ಯಗಳನ್ನು ಆಡಿದ್ದೆ. ಅದು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ಪರ 8 ವರ್ಷ ಆಡಿದೆ. ಇದರ ನೆನಪು ಸದಾ ಹಸಿರು’ ಎಂದರು.

ನಂತರ ‘ಎಂಟು ವರ್ಷಗಳ ಬಳಿಕ ಮತ್ತೆ ಹಳದಿ ಜೆರ್ಸಿ ತೊಡುತ್ತಿದ್ದೇನೆ ಎನ್ನುವುದೇ ನನಗೆ ಖುಷಿಯ ವಿಷಯ’ ಎನ್ನುತ್ತಾ ಭಾವುಕರಾದರು. ಪುಣೆ ಇರಲಿ, ಸಿಎಸ್ ಕೆ ಇರಲಿ ನನ್ನ ಪರಿಪೂರ್ಣ ಆಟ ನೀಡಲು ಪ್ರಯತ್ನಿಸಿದ್ದೇನೆ ಎಂದು ಧೋನಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಅಭ್ಯಾಸಕ್ಕೆ ಮರಳಿದ ಎಂಎಸ್‌ ಧೋನಿ

ಪಲಾಶ್ ಮುಚ್ಚಲ್‌ಗಿಂತ ಮತ್ತೊಂದು ಸಂಬಂಧ, ನಿರ್ಮಾಪಕ ಬಿಚ್ಚಿಟ್ಟ ಸತ್ಯವೇನು

ಕನ್ನಡಿಗ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಕಾಲಿಗೆ ಬಿದ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್

ವಿರಾಟ್ ಕೊಹ್ಲಿಯಂತೆ ಸ್ಮೃತಿ ಮಂಧಾನಗೂ ಬೆಂಗಳೂರಿನಲ್ಲಿ ಇದೊಂದು ತುಂಬಾ ಇಷ್ಟವಂತೆ

WPL 2026: ಆರನೇ ಗೆಲುವಿನ ಕನಸಿನಲ್ಲಿರುವ ಆರ್ ಸಿಬಿ ವನಿತೆಯರಿಗೆ ಇಂದು ಯಾರು ಎದುರಾಳಿ ಗೊತ್ತಾ

ಮುಂದಿನ ಸುದ್ದಿ
Show comments