Publish Date: Sat, 18 Apr 2026 (17:43 IST)
Updated Date: Sat, 18 Apr 2026 (17:45 IST)
ದೆಹಲಿಯ ಅಬ್ಬರದ ಬೌಲಿಂಗ್ಗೆ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಡೆಲ್ಲಿಗೆ 176ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಈ ಮೂಲಕ ಆರ್ಸಿಬಿಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು.
ಪಿಲ್ ಸಾಲ್ಟ್ 38 ಎಸೆತಕ್ಕೆ 63 ರನ್, ವಿರಾಟ್ ಕೊಹ್ಲಿ 13 ಎಸೆತಕ್ಕೆ 19ರನ್, ದೇವದತ್ತ್ ಪಡಿಕ್ಕಲ್ 13 ಎಸೆತಕ್ಕೆ 18ರನ್, ರಜತ್ ಪಟಿದಾರ್ 4 ಎಸೆತಕ್ಕೆ 8 ರನ್, ಟಿಮ್ ಡೇವಿಡ್ 17ಎಸೆತಕ್ಕೆ 26ರನ್, ಜಿತೇಶ್ ಶರ್ಮಾ 20 ಎಸೆತಕ್ಕೆ 14ರನ್, ಶೆಫಾರ್ಡ್ 4 ಎಸೆತಕ್ಕೆ 1ರನ್, ಕ್ರುನಾಲ್ ಪಾಂಡ್ಯ 10 ಎಸೆತಕ್ಕೆ 12ರನ್ ಹಾಗೂ ಭುವನೇಶ್ವರ್ 2 ಎಸೆತಕ್ಕೆ 3 ರನ್ ಗಳಿಸಿದರು.
ಈ ಮೂಲಕ 20 ಓವರ್ನಲ್ಲಿ ಆರ್ಸಡಿಬಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ ಡೆಲ್ಲಿಗೆ 176 ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.