Webdunia - Bharat's app for daily news and videos

Install App

ರಣಜಿ ಟ್ರೋಫಿಗೆ ತಟಸ್ಥ ಮೈದಾನಗಳಿಗೆ ಬಿಸಿಸಿಐ ತಾಂತ್ರಿಕ ಸಮಿತಿ ಶಿಫಾರಸು

Webdunia
ಸೋಮವಾರ, 30 ಮೇ 2016 (17:22 IST)
ಬಿಸಿಸಿಐ ತಾಂತ್ರಿಕ ಸಮಿತಿಯು 2016-17ನೇ ಸಾಲಿನ ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ಮೈದಾನಗಳಲ್ಲಿ ಆಡಿಸುವ ಮೂಲಕ ಪಂದ್ಯವನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿ ಮಾಡುವಂತೆ ಶಿಫಾರಸು ಮಾಡಿದೆ. ತವರು ತಂಡಗಳಿಗೆ ನಿರ್ದಿಷ್ಟ ಪಿಚ್ ಸಿದ್ಧಪಡಿಸುವುದನ್ನು ತಪ್ಪಿಸಲು ಮತ್ತು ವಿವಿಧ ಪರಿಸ್ಥಿತಿಗಳಲ್ಲಿ ಆಟಗಾರರನ್ನು ಆಟಕ್ಕೆ ಒಡ್ಡುವುದಾಗಿದೆ. ಮಂಡಳಿಯ ಕಾರ್ಯಕಾರಿ ಸಮಿತಿ ಇದನ್ನು ಅಂಗೀಕರಿಸಬೇಕಾಗಿದೆ. ಇದೇ ರೀತಿಯ ಶಿಫಾಸರನ್ನು 2012-13ರ ಸೀಸನ್‌ನಲ್ಲಿ ಮಾಡಲಾಗಿತ್ತು. ಆದರೆ ಬಳಿಕ ಅದನ್ನು ತಳ್ಳಿಹಾಕಲಾಗಿತ್ತು. 
 
ಕಳೆದ ಸೀಸನ್ ರಣಜಿ ಟ್ರೋಫಿಯಲ್ಲಿ ಕೇವಲ 2 ದಿನಗಳಲ್ಲಿ 9 ಪಂದ್ಯಗಳು ಮುಗಿದಾಗ ರಣಜಿ ಟ್ರೋಫಿಯಲ್ಲಿ ಬಳಸುವ ಪಿಚ್‌ಗಳ ಪರಿಶೀಲನೆ ನಡೆಸಲಾಯಿತು. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕಳಪೆ ಪಿಚ್‌ಗಳನ್ನು ಟೀಕಿಸಿ ಇವು ಯುವ ಕ್ರಿಕೆಟಿಗರ ಪ್ರತಿಭೆಯನ್ನು ಮೊಟಕು ಮಾಡುತ್ತದೆಂದು ಆಪಾದಿಸಿದ್ದರು.  

ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒಳ್ಳೆಯ ಮೈದಾನಗಳನ್ನು ಸಿದ್ಧಪಡಿಸಬೇಕೆಂದು ಅವರು ಸಲಹೆ ಮಾಡಿದ್ದರು.  ಕರ್ನಾಟಕ ಕೋಚ್ ಜೆ. ಅರುಣ್ ಕುಮಾರ್ ಸಮಿತಿಯ ಶಿಫಾರಸನ್ನು ಸ್ವಾಗತಿಸಿದ್ದಾರೆ. ಆದರೆ ಅಸ್ಸಾಂ ಕೋಚ್ ಸನತ್ ಕುಮಾರ್ ಅಸಮ್ಮತಿ ಸೂಚಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ರಿಷಭ್ ಪಂತ್ ಶತಕ ಸಿಡಿಸಿದರೆ ಫ್ಲಿಪ್ ಮಾಡುವುದರ ಹಿಂದಿದೆ ರೋಚಕ ಕಹಾನಿ

ಮುಂದಿನ ಸುದ್ದಿ
Show comments