Webdunia - Bharat's app for daily news and videos

Install App

Rohit Sharma: ನಿವೃತ್ತಿಯಾಗಲು ರೋಹಿತ್ ಶರ್ಮಾಗೆ ಬಿಸಿಸಿಐನಿಂದಲೇ ಸೂಚನೆ

Krishnaveni K
ಬುಧವಾರ, 5 ಫೆಬ್ರವರಿ 2025 (15:47 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ನಿವೃತ್ತಿಯಾಗಲು ಈಗ ಬಿಸಿಸಿಐನಿಂದಲೇ ಸೂಚನೆ ಬಂದಿದೆ ಎನ್ನಲಾಗಿದೆ. ರೋಹಿತ್ ಗೆ ಬಿಸಿಸಿಐ ಡೆಡ್ ಲೈನ್ ಕೊಟ್ಟಿದೆ.

ರೋಹಿತ್ ಶರ್ಮಾ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ನಾಯಕನಾಗಿಯೂ ಮೊದಲಿನ ಚಾರ್ಮ್ ಇಲ್ಲ ಎಂಬ ಅಪವಾದಗಳಿವೆ. ಹೀಗಾಗಿ ಅವರ ನಿವೃತ್ತಿಗೆ ಒತ್ತಡ ಕೇಳಿಬಂದಿದೆ. ಇದೀಗ ಸ್ವತಃ ಬಿಸಿಸಿಐ ರೋಹಿತ್ ನಿವೃತ್ತಿಗೆ ಡೆಡ್ ಲೈನ್ ನೀಡಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಆದರೆ ಇದೇ ಅವರಿಗೆ ಕೊನೆಯ ಸರಣಿಯಾಗುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ನಿವೃತ್ತಿಯಾಗಲು ಬಿಸಿಸಿಐನಿಂದಲೇ ಸೂಚನೆ ಬಂದಿದೆ ಎನ್ನಲಾಗಿದೆ.

ಹೊಸ ನಾಯಕನನ್ನು ಬೆಳೆಸುವ ಉದ್ದೇಶದಿಂದ ರೋಹಿತ್ ದಾರಿ ಮಾಡಿಕೊಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ರೋಹಿತ್ ಕನಿಷ್ಠ ಆಟಗಾರನಾಗಿಯಾದರೂ ತಂಡದಲ್ಲಿ ಮುಂದುವರಿಯಬೇಕಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಲೇಬೇಕು. ಬಳಿಕ ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಅವರಿಗೆ ನಾಯಕರಾಗಿ ಅಲ್ಲದಿದ್ದರೂ ಕೇವಲ ಆಟಗಾರನಾಗಿಯಾದರೂ ತಂಡದಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ. ಆದರೆ ಇನ್ನೊಬ್ಬ ಹಿರಿಯ ಆಟಗಾರ ವಿರಾಟ್ ಕೊಹ್ಲಿಗೆ ಇನ್ನಷ್ಟು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS Match:ಪಂಜಾಬ್‌ ತವರಿನಲ್ಲೇ ರೀವೆಂಜ್‌ ತೀರಿಸಿಕೊಂಡ ಆರ್‌ಸಿಬಿ

IPL 2025: RCB ಫ್ಯಾನ್ಸ್ ಕೆಣಕಿದ ಶ್ರೇಯಸ್‌ ಅಯ್ಯರ್‌ಗೆ ಗೆಲುವಿನ ಮೂಲಕ ಕೊಹ್ಲಿ ಕೊಡುತ್ತಾರಾ ಕೌಂಟರ್‌

Vaibhav Suryavamshi: ಐಪಿಎಲ್‌ ಚೊಚ್ಚಲ ಪಂದ್ಯಾಟಕಕ್ಕಾಗಿ ಪಿಜ್ಜಾ, ಮಟನ್‌ಗೆ ಗುಡ್‌ಬೈ ಹೇಳಿದ ವೈಭವ್ ಸೂರ್ಯವಂಶಿ

RCB vs PBKS Match live: ಪಂಜಾಬ್ ವಿರುದ್ಧ ಸೇಡು ತೀರಿಸಕೊಳ್ಳುತ್ತಾ ರಜತ್ ಪಟಿದಾರ್ ಪಡೆ

ಚಿನ್ನಸ್ವಾಮಿಯ ಸೋಲಿಗೆ ಮುಲ್ಲನಪುರದಲ್ಲಿ ಸೇಡು ತೀರಿಸಲು ಸಜ್ಜಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಮುಂದಿನ ಸುದ್ದಿ
Show comments