Select Your Language

Notifications

webdunia
webdunia
webdunia
webdunia

ಸಚಿನ್, ಗಂಗೂಲಿ, ಲಕ್ಷ್ಮಣ್ ದುಡ್ಡ ಕೇಳಿರಲಿಲ್ಲವೆಂದು ಬಿಸಿಸಿಐ ಸ್ಪಷ್ಟನೆ

ಸಚಿನ್, ಗಂಗೂಲಿ, ಲಕ್ಷ್ಮಣ್ ದುಡ್ಡ ಕೇಳಿರಲಿಲ್ಲವೆಂದು ಬಿಸಿಸಿಐ ಸ್ಪಷ್ಟನೆ
Mumbai , ಸೋಮವಾರ, 12 ಜೂನ್ 2017 (10:24 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಗೌರವಧನಕ್ಕಾಗಿ ಬೇಡಿಕೆಯಿಟ್ಟಿರಲಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

 
ಈ ಮೂರೂ ಬಿಗ್ ಥ್ರೀ ಕ್ರಿಕೆಟಿಗರು, ಕೋಚ್ ಆಯ್ಕೆ ಮಾಡುವ ಕೆಲಸಕ್ಕೆ ಗೌರವ ಧನ ನೀಡಬೇಕೆಂದು ಆಗ್ರಹಿಸಿದ್ದರು ಎಂದು ನಿನ್ನೆ ವರದಿಯಾಗಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಬಿಸಿಸಿಐ ಹೇಳಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರ ಹಾಕಿದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ‘ಮಾಧ್ಯಮಗಳಲ್ಲಿ ವರದಿಯಾದ ಈ ಸುದ್ದಿಗಳೆಲ್ಲಾ ಸತ್ಯಕ್ಕೆ ದೂರವಾದುದು’ ಎಂದಿದ್ದಾರೆ. ಲಂಕಾ ವಿರುದ್ಧ ಪಂದ್ಯ ಮುಗಿದ ಮೇಲೆ ಕೋಚ್ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚಿಸಲು ಸಭೆ ಸೇರಿದ್ದ ಈ ಕ್ರಿಕೆಟಿಗರು ರಾಹುಲ್ ಜೋಹ್ರಿ ಬಳಿ ವೇತನಕ್ಕಾಗಿ ಡಿಮ್ಯಾಂಡ್ ಮಾಡಿದ್ದರು ಎಂದು ವರದಿಯಾಗಿತ್ತು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯ ನೋಡಿ ಕಳ್ಳ ಎಂದು ಕೂಗಿದ ಪ್ರೇಕ್ಷಕರು!