Webdunia - Bharat's app for daily news and videos

Install App

ಬಾಂಗ್ಲಾ ಅಂಡರ್ 19 ಕ್ರಿಕೆಟಿಗರು ಭಾರತೀಯರನ್ನು ಅಣಕಿಸಿದ್ದು ಇದಕ್ಕೇ!

Webdunia
ಸೋಮವಾರ, 17 ಫೆಬ್ರವರಿ 2020 (09:11 IST)
ಢಾಕಾ: ದ.ಆಫ್ರಿಕಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಫೈನಲ್ ನಲ್ಲಿ ಭಾರತೀಯ ಕ್ರಿಕೆಟಿಗರು ಸೋತಾಗ ಚಾಂಪಿಯನ್ ಆದ ಬಾಂಗ್ಲಾ ಅಂಡರ್ 19 ಕ್ರಿಕೆಟಿಗರು ಅಸಭ್ಯ ವರ್ತನೆ ತೋರಿದ್ದು ಭಾರೀ ಸುದ್ದಿಯಾಗಿತ್ತು.


ಆದರೆ ತಾವು ಹೀಗೆ ಮಾಡಲು ಕಾರಣವೇನೆಂದು ಬಾಂಗ್ಲಾ ಕ್ರಿಕೆಟಿಗ ಶೌರಿಫುಲ್ ಇಸ್ಲಾಂ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶೌರಿಫ್ ಭಾರತಕ್ಕೆ ಸೋತಾಗ ಎಂತಹ ಅನುಭವವಾಗುತ್ತದೆ ಎಂದು ತೋರಿಸಿಕೊಡಬೇಕಾಗಿತ್ತು ಎಂದಿದ್ದಾರೆ.

‘ಹಿಂದೆ ನಾವು ಅವರ ವಿರುದ್ಧ ನಮ್ಮದೇ ನೆಲದಲ್ಲಿ ಏಷ್ಯಾಕಪ್  ಸೆಮಿಫೈನಲ್ ಮತ್ತು ಫೈನಲ್ ಸೋತಿದ್ದೆವು. ಆಗ ಅವರು ನಮ್ಮ ಎದುರು ಭಾರೀ ಸಂಭ್ರಮಪಟ್ಟು ಕುಣಿದಾಡಿದ್ದರು. ನಮಗೆ ಆಗ ತೀರಾ ಬೇಸರವಾಗಿತ್ತು. ಸೋತಾಗ ನಮ್ಮ ಎದುರು ಹಾಗೆ ಸಂಭ್ರಮಿಸಿದರೆ ಎಷ್ಟು ನೋವಾಗುತ್ತದೆ ಎಂದು ಅವರಿಗೆ ತೋರಿಸಿಕೊಡಬೇಕಾಗಿತ್ತು. ಅದಕ್ಕೇ ಆ ರೀತಿ ಸಂಭ್ರಮಪಟ್ಟೆವು’ ಎಂದು ಶೌರೀಫ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments