Select Your Language

Notifications

webdunia
webdunia
webdunia
webdunia

ಲೋಧಾ ಸಮಿತಿ ಶಿಫಾರಸು ಅನುಷ್ಠಾನಕ್ಕೆ ಬಿಸಿಸಿಐ ಅಂಗಳದಲ್ಲಿ ಚೆಂಡು: ಗೋಯಲ್

bcci
ನವದೆಹಲಿ , ಮಂಗಳವಾರ, 19 ಜುಲೈ 2016 (14:28 IST)
ಲೋಧಾಸಮಿತಿ ಶಿಫಾರಸು ಮಾಡಿದ ಸುಧಾರಣೆಗಳನ್ನು ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನವು ಸಂಪೂರ್ಣವಾಗಿ ಬಿಸಿಸಿಐ ವಿಶೇಷಾಧಿಕಾರವಾಗಿದ್ದು, ಚೆಂಡು ಅವರ ಅಂಗಳದಲ್ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಚೆಂಡು ಬಿಸಿಸಿಐ ಅಂಗಳದಲ್ಲಿದೆ. ಸುಪ್ರೀಂಕೋರ್ಟ್ ಆದೇಶ ಮತ್ತು ಲೋಧಾ ಸಮಿತಿ ವರದಿಯನ್ನು ಬಿಸಿಸಿಐ ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಕ್ರೀಡೆಯಲ್ಲಿ ಪಾರದರ್ಶಕತೆಯನ್ನು ನಾನು ಇಷ್ಟಪಡುತ್ತೇನೆ ಎಂದು ಭಾರತದ ಒಲಿಂಪಿಕ್ ತಂಡಕ್ಕೆ ಅಧಿಕೃತ ಸೆಂಡ್ ಆಫ್ ನೀಡುವ ಕಾರ್ಯಕ್ರಮದಲ್ಲಿ ಗೋಯಲ್ ಮಾಧ್ಯಮಕ್ಕೆ ತಿಳಿಸಿದರು.

ಬಿಸಿಸಿಐಯನ್ನು ಆರ್‌ಟಿಐ ವ್ಯಾಪ್ತಿಗೆ ತರುವ ಪ್ರಸ್ತಾವನೆ ಕುರಿತು ಗೋಯಲ್ ಯಾವುದೇ ಕಾಮೆಂಟ್ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಾರ್ನ್ ಎಸೆತದ ರೀತಿಯಲ್ಲೇ ಯಾಸಿರ್ ಶಾಹ್ ಮಾಂತ್ರಿಕ ಎಸೆತ