Webdunia - Bharat's app for daily news and videos

Install App

ವಿಮಾನದಲ್ಲಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ

Webdunia
ಗುರುವಾರ, 11 ಅಕ್ಟೋಬರ್ 2018 (07:35 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಕ್ರಿಕೆಟ್ ಜಗತ್ತು ಇಂದಿಗೂ ವಿಶೇಷ ಗೌರವ ನೀಡುತ್ತದೆ. ಅದಕ್ಕೆ ಕಾರಣ ಅವರ ವ್ಯಕ್ತಿತ್ವ ಅಂತಹದ್ದೇ ಘಟನೆಯೊಂದು ಇದೀಗ ನಡೆದಿದೆ.

ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಸ್ಪಿನ್ ದಿಗ್ಗಜನನ್ನು ನೋಡಿದ ಅಭಿಮಾನಿಯೊಬ್ಬರು ಖುಷಿಯಿಂದ ಟ್ವೀಟ್ ಮಾಡಿದ್ದಕ್ಕೆ ಕುಂಬ್ಳೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಲ್ಲದೆ, ಪಕ್ಕ ಬಂದು ಅಟೋಗ್ರಾಫ್ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸೋಹಿನಿ ಎಂಬ ಮಹಿಳೆ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅನಿಲ್ ಕುಂಬ್ಳೆಯನ್ನು ನೋಡಿ ‘ನಾನು ಪ್ರಯಾಣಿಸುತ್ತಿರುವ ವಿಮಾನದಲ್ಲೇ ಅನಿಲ್ ಕುಂಬ್ಳೆ ಇದ್ದಾರೆ. ಅವರ ಮುಖವನ್ನು ಒಮ್ಮೆ ನೋಡಿದ ತಕ್ಷಣ ನನಗೆ ಹಿಂದೆ ಅವರು ವೆಸ್ಟ್ ಇಂಡೀಸ್ ವಿರುದ್ಧ ದವಡೆ ಮುರಿದುಕೊಂಡರೂ ಬ್ಯಾಂಡೇಜ್ ಕಟ್ಟಿಕೊಂಡು ಆಡಿದ್ದು ನೆನಪಾಗಿ ಕಣ್ಣು ತುಂಬಿ ಬಂತು. ಅವರು ನಮಗೆ ನೀಡಿದ ಎಲ್ಲಾ ಅದ್ಭುತ ಕ್ಷಣಗಳಿಗೆ ಧನ್ಯವಾದ. ಅವರ ಬಳಿ ಹೋಗಿ ಒಮ್ಮೆ ಮಾತಾಡಿ ಬರಬೇಕೆನಿಸುತ್ತಿದೆ. ಆದರೆ ನನ್ನ ಕಾಲು ಮರಗಟ್ಟಿ ಹೋಗಿದೆ’ ಎಂದು ಸೋಹಿನಿ ವಿಮಾನದಲ್ಲೇ ಟ್ವೀಟ್ ಮಾಡಿದ್ದರು.

ಇದನ್ನು ತಕ್ಷಣ ನೋಡಿದ ಅನಿಲ್ ಕುಂಬ್ಳೆ ಅಲ್ಲಿಯೇ ಟ್ವೀಟ್ ಮೂಲಕ ಸೋಹಿನಿ ಪ್ರತಿಕ್ರಿಯೆ ನೀಡಿದ್ದು ‘ವಿಮಾನ ಟೇಕ್ ಆಫ್ ಆದ ಬಳಿಕ ಸಂಕೋಚವಿಲ್ಲದೇ ನನ್ನ ಬಳಿ ಬಂದು ಮಾತಾಡಿ’ ಎಂದು ಬರೆದರು.

ಅಷ್ಟೇ ಅಲ್ಲ, ಹೇಳಿದಂತೆ ಸೋಹಿನಿಗೆ ಅನಿಲ್ ಕುಂಬ್ಳೆ ಬೋರ್ಡಿಂಗ್ ಪಾಸ್ ಮೇಲೆ ಅಟೋಗ್ರಾಫ್ ನೀಡಿದ್ದಾರೆ. ಖುಷಿಯಾದ ಅಭಿಮಾನಿ ಇದನ್ನು ಫೋಟೋ ಫ್ರೇಮ್ ಹಾಕಿ ಜತೆಗಿಟ್ಟುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಟ್ರೋಫಿ ಗೆದ್ದಾಗ ಕೊಹ್ಲಿಗೆ ಕಣ್ಣೀರು ಬಂತು, ಅಭಿಮಾನಿ ಸತ್ತಾಗ ಬರಲಿಲ್ಲ ಯಾಕೆ

Gautam Gambhir: ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಗೌತಮ್ ಗಂಭೀರ್ ಮಹತ್ವದ ಹೇಳಿಕೆ

Virat Kohli: ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಏನೂ ಹೇಳಿಲ್ವಾ, ಇಲ್ಲಿದೆ ಅಪ್ ಡೇಟ್

Chinnaswamy stampede: ನಮ್ಮಲ್ಲಿ ಹೀಗಾಗಿರ್ಲಿಲ್ಲಪ್ಪ, ನೋವಿನಲ್ಲೂ ಬೆಂಗಳೂರಿಗೆ ತಿವಿದ ಮುಂಬೈ ಫ್ಯಾನ್ಸ್

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಪೊಲೀಸರಲ್ಲ ಇದೇ ಎರಡು ಕಾರಣ ಇದುವೇ

ಮುಂದಿನ ಸುದ್ದಿ
Show comments