Webdunia - Bharat's app for daily news and videos

Install App

ಕೊರೋನಾ ಭಯಕ್ಕೆ ಪತ್ನಿ, ಮಕ್ಕಳನ್ನು ಮನೆಯಿಂದ ಹೊರಗಟ್ಟಿದ ಪತಿರಾಯ!

Webdunia
ಗುರುವಾರ, 9 ಜುಲೈ 2020 (09:58 IST)
ವಡೋದರ: ಕೊರೋನಾ ಎಂಬ ಮಹಾಮಾರಿ ಮನುಷ್ಯ ಮನುಷ್ಯರ ನಡುವಿನ ನಂಬಿಕೆಯನ್ನೇ ಇಲ್ಲವಾಗುವಂತೆ ಮಾಡಿದೆ. ಇದೀಗ ಗುಜರಾತ್ ನ ವಡೋದರಲ್ಲಿ ಪತಿರಾಯನೊಬ್ಬ ಕೊರೋನಾ ಭಯದಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗಟ್ಟಿದ ಧಾರುಣ ಘಟನೆ ನಡೆದಿದೆ.

 

ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪತಿಯ ತಾಯಿಯನ್ನು ನೋಡಿಕೊಳ್ಳಲು ಪತ್ನಿ ಎರಡು ವಾರ ಆಸ್ಪತ್ರೆಯಲ್ಲಿ ತಂಗಿದ್ದಳು. ಈ ವೇಳೆ ಆಕೆಯ ಮಕ್ಕಳೂ ಜತೆಯಿದ್ದರು. ಆದರೆ ಮನೆಗೆ ಬಂದ ಮೇಲೆ ಆಕೆಗೆ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಂಡುಬಂದಿದ್ದರಿಂದ ಆಕೆಗೆ ಕೊರೋನಾ ತಗುಲಿರಬಹುದು ಎಂದು ಶಂಕಿಸಿದ ಪತಿ ಮಹಾಶಯ ನಿರ್ದಾಕ್ಷಿಣ್ಯವಾಗಿ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾನೆ.

ಮೇಯಲ್ಲಿ ಆರೋಪಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಅದಾದ ಬಳಿಕ ಆಕೆ ಸುಮಾರು ಒಂದು ತಿಂಗಳು ಅಹಮ್ಮದಾಬಾದ್ ನಲ್ಲಿರುವ ಅವರ ಇನ್ನೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಜೂನ್ 29 ರಂದು ಅಲ್ಲಿಗೂ ಬಂದ ಪತಿ ಅಲ್ಲಿಂದಲೂ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೆ, ಆಕೆಗೆ ವಿಚ್ಛೇದನ ಪತ್ರ ನೀಡಿದ್ದ. ಇದರಿಂದ ಎಚ್ಚೆತ್ತುಕೊಂಡ ಆಕೆ ಪೊಲೀಸರಿಗೆ ಪತಿಯ ದುರ್ವರ್ತನೆ ಬಗ್ಗೆ ದೂರು ನೀಡಿದ್ದಾಳೆ. ಇದೀಗ ಪತಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments