Webdunia - Bharat's app for daily news and videos

Install App

ಡೆಡ್ಲಿ ಕೊರೊನಾ : ಟಿಬೇಟಿಯನ್ನರ ಮೇಲೆ ಡಿಸಿ ಕಣ್ಣು

Webdunia
ಶನಿವಾರ, 21 ಮಾರ್ಚ್ 2020 (14:19 IST)
ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಟಿಬೇಟಿಯನ್ ಕಾಲೋನಿಯತ್ತ ಜಿಲ್ಲಾಡಳಿತ ಕಣ್ಣು ನೆಟ್ಟಿದೆ.

ಕೋವಿಡ್ -19 ಸೋಂಕು  ಮುಂಜಾಗೃತಾ ಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಟಿಬೇಟಿಯನ್ ಕಾಲೋನಿ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.

ಮುಂಡಗೋಡ ತಹಶೀಲ್ದಾರ ಅವರ ಪರವಾನಿಗೆ ಇಲ್ಲದೇ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬೌದ್ಧ ಬಿಕ್ಷುಗಳು ಹಾಗೂ ಇನ್ನಿತರೆ ವ್ಯಕ್ತಿಗಳ ಆಗಮನ ಹಾಗೂ ನಿರ್ಗಮನವನ್ನು ನಿಷೇಧಿಸಿದ್ದಾರೆ.  ದೀರ್ಘಾವಧಿಯಿಂದ ಅನ್ಯ ಕಾರಣಕ್ಕಾಗಿ ಹೊರಗುಳಿದ ಬೌದ್ಧ ಬಿಕ್ಷುಗಳು ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಹಿಂದಿರುಗಿದಲ್ಲಿ ಕಡ್ಡಾಯವಾಗಿ ಸ್ವಯಂ 14  ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರತಕ್ಕದ್ದು. ಇದನ್ನು ಅಲ್ಲಿಯ ಟಿಬೇಟಿಯನ್ ಕೇಂದ್ರದ ಆಡಳಿತಾಧಿಕಾರಿಗಳು ಖಚಿತಪಡಿಸತಕ್ಕದ್ದು. ಅಲ್ಲದೇ ಇದನ್ನು ತಾಲೂಕಾ ವೈದ್ಯಾಧಿಕಾರಿಗಳು  ಮೇಲುಸ್ತುವಾರಿ ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.

 ಈಗಾಗಲೇ ಮುಂಡಗೋಡದ ಟಿಬೇಟಿಯನ್ ಕಾಲೋನಿಗೆ ಹೊರಗಿನ ಪ್ರದೇಶಗಳಿಂದ ಬಂದಂತಹ ಬೌದ್ಧ ಬಿಕ್ಷುಗಳು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡತಕ್ಕದ್ದು ಹಾಗೂ ಕಾಲೋನಿಯಲ್ಲಿ ಐದಕ್ಕಿಂತ ಹೆಚ್ಚಿನ ಜನರು ಗುಂಪಾಗಿ ಒಂದು ಕಡೆ ಸೇರುವಂತಿಲ್ಲ. ಈ ಕಾಲೋನಿಯಿಂದ ಹೋರಹೋಗಲು ಇಚ್ಚಿಸಿದ ವ್ಯಕ್ತಿಗಳು ಮುಂದಿನ ಒಂದು ತಿಂಗಳ ಕಾಲ ಅಲ್ಲಿನ ತಹಶೀಲ್ದಾರರ ಅನುಮತಿ ಇಲ್ಲದೇ ಪುನಃ ಕಾಲೋನಿ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments