Select Your Language

Notifications

webdunia
webdunia
webdunia
webdunia

ಅಡ್ವಾಣಿಯವರಿಗೆ ಕಷ್ಟದೊಂದಿಗೆ ಸಫಲತೆ

ಅಡ್ವಾಣಿಯವರಿಗೆ ಕಷ್ಟದೊಂದಿಗೆ ಸಫಲತೆ
PTI
ಬಿಜೆಪಿಯ ನೇತಾರ, ಪ್ರಧಾನ ಮಂತ್ರಿ ಪಟ್ಟದ ಪ್ರಬಲ ಸ್ಪರ್ಧಿ ಲಾಲ್‌ಕೃಷ್ಣ ಅಡ್ವಾಣಿ ಅವರು 1927ರಲ್ಲಿ ಜನಿಸಿದರು. ಅವರ ಕುಂಡಲಿಯ ಪ್ರಕಾರ ಅವರದು ತುಲಾ ಲಗ್ನ, ಮೇಷ ರಾಶಿ. ಅಡ್ವಾಣಿ ಕುಂಡಲಿಯಲ್ಲಿ ಸೂರ್ಯ ಪ್ರಬಲನಾಗಿರುವುದರಿಂದ ಅವರು ಜನ್ಮದತ್ತ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ಜತೆಗೆ ಉತ್ತಮ ವಾಕ್ಪಟುತ್ವ, ಬರೆಯುವ ಪ್ರತಿಭೆ, ಸಾಮರ್ಥ್ಯ ಅವರಲ್ಲಿರುವುದು ಸಾಮಾನ್ಯ.

ಸದ್ಯ ಕುಂಡಲಿಯಲ್ಲಿ ಶುಕ್ರ, ಗುರು, ರಾಹು ಹಾಗೂ ಬುಧನ ಸ್ಥಿತಿ ಉತ್ತಮವಾಗಿದೆ. ಕೇತು ಹಾಗೂ ರಾಹು ಸಹಾಯಕರಾಗಿ ಗೋಚರಿಸುತ್ತಾರೆ. ಚುನಾವಣೆಯ ದೃಷ್ಟಿಯಿಂದ ಜೂನ್ 9ರವರೆಗೆ ಅಡ್ವಾಣಿಯವರಿಗೆ ಗುರು ಮಹಾದೆಸೆಯಿದೆ. ಇದು ರಾಹುವಿನ ಒಳಗೆ ಗೋಚರಿಸುತ್ತಿದೆ. ತುಲಾ ಲಗ್ನಕ್ಕೆ ಗುರು ಯೋಗಕಾರಕನಲ್ಲ. ಅಷ್ಟೊಂದು ಲಾಭದಾಯಕ ಪರಿಸ್ಥಿತಿಯಿರದಿದ್ದರೂ, ಕಷ್ಟದ ಪರಿಸ್ಥಿತಿಯಂತೂ ಇಲ್ಲ. ರಾಹು ಇಲ್ಲಿ ಉಪದ್ರವಕಾರಿಯಾಗಿ ಕಾಣುವುದಿಲ್ಲ. ಬದಲಾಗಿ ಸಹಾಯವನ್ನೇ ಮಾಡುತ್ತಾನೆ.

ಅಡ್ವಾಣಿ ಅವರಿಗೆ ಮತಗಣನೆಯ ಸಮಯದಲ್ಲಿ ಗುರು ಕುಂಭದಲ್ಲಿರುವುದರಿಂದ ಕಷ್ಟಗಳು ಎದುರಾಗಬಹುದು. ಆದರೆ ಇಂಥ ಸಮಯದಲ್ಲಿ ಶನಿ ಹಾಗೂ ಗುರುವಿನ ಸಮ್ಮಿಲನದಿಂದ ಒಳ್ಳೆಯದೂ ನಡೆಯುವ ಸಂಭವವಿದೆ. ಅಲ್ಲದೆ ಅಡ್ವಾಣಿಯವ ಮನೋಇಚ್ಛೆ ಪೂರ್ಣಗೊಳ್ಳುವ ಸಾಧ್ಯತೆಯೂ ಗೋಚರಿಸುತ್ತಿದೆ. ಹಾಗಾಗಿ ಅಡ್ವಾಣಿ ಅವರಿಗೆ ಸಫಲತೆ ಕಾಣಬಹುದು.

Share this Story:

Follow Webdunia kannada