Webdunia - Bharat's app for daily news and videos

Install App

ಕೇಂದ್ರ ಬಜೆಟ್ 2018: 30 ವರ್ಷಗಳ ಅವಧಿಯಲ್ಲಿ ಅದೃಷ್ಟಶಾಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ

ramkrishna puranik
ಗುರುವಾರ, 1 ಫೆಬ್ರವರಿ 2018 (11:14 IST)
2018-19 ಸಾಲಿನ ಕೇಂದ್ರ ಬಜೆಟ್ ಸಿದ್ಧವಾಗಿದೆ. ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರು ನಾಳೆಯ ದಿನ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಹಿಂದಿನ ಹಣಕಾಸು ಸಚಿವರಿಗಿಂತ ಭಿನ್ನವಾಗಿರುವ ಅರುಣ್ ಜೇಟ್ಲಿ ಅವರು ತಮ್ಮ ವಾರ್ಷಿಕ ಹಣಕಾಸಿನ ವರದಿ ಓದುತ್ತಿರುವಾಗ ಹೆಚ್ಚು ಶಾಂತ ಸ್ವಭಾವದಿಂದ ಇರುತ್ತಾರೆ.
ರಾಜಕೀಯವಾಗಿ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ, ಕಳೆದ 30 ವರ್ಷಗಳಲ್ಲಿ ಇತರರಿಗಿಂತ ಅರುಣ್ ಜೇಟ್ಲಿಯವರು ಹಣಕಾಸು ಸಚಿವರಾಗಿ ಹೆಚ್ಚು ಭರವಸೆ ನೀಡಿದ್ದಾರೆ. ಜೇಟ್ಲಿಯವರು ತಮ್ಮ ಬಜೆಟ್‌ನ ಪರಿಣಾಮವಾಗಿ ವಸ್ತುಗಳು ದುಬಾರಿ ಅಥವಾ ಕಡಿಮೆಯಾಗುವ ಕುರಿತು ಹೆಚ್ಚು ಚಿಂತಿಸುವುದಿಲ್ಲ ಮತ್ತು ಸರ್ಕಾರದ ಬೊಕ್ಕಸ ಮತ್ತು ಅವರ ಪಕ್ಷದ ರಾಜಕೀಯ ಬಂಡವಾಳದ ಕೊರತೆಯ ನಡುವಿನ ಏರಿಳಿತಗಳ ಸಮತೋಲನವನ್ನು ನಿರ್ವಹಿಸಲು ಶ್ರಮ ಪಡುತ್ತಾರೆ.
 
1984 ರಿಂದ ದೊಡ್ಡ ಪ್ರಮಾಣದ ಜನಾದೇಶ
 
ಅರುಣ್ ಜೇಟ್ಲಿಯವರು ಲೋಕಸಭೆಯಲ್ಲಿನ ಸಂಪೂರ್ಣ ಬಹುಮತದ ಬೆಂಬಲದೊಂದಿಗೆ 2019 ರ ಲೋಕಸಭಾ ಚುನಾವಣೆಗಳನ್ನು ಎದುರಿಸುವ ಮೊದಲು ತಮ್ಮ ಕೊನೆಯ ಸಂಪೂರ್ಣ ಬಜೆಟ್ ಅನ್ನು ಪ್ರಸ್ತುತ ಪಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ರಾಜ್ಯಸಭೆಯ ಅನುಮೋದನೆ ಕಡ್ಡಾಯವಲ್ಲ, ತಾವು ಇಷ್ಟಪಡದ ಯಾವುದೇ ಮಾರ್ಪಾಡುಗಳಿಲ್ಲದೆಯೇ ಅದನ್ನು ಜಾರಿಗೆ ತರುವ ಭರವಸೆ ಜೇಟ್ಲಿಯವರಿಗೆ ಇದೆ.
 
1991 -ಉದಾರೀಕರಣದಿಂದ ಆರು ಹಣಕಾಸು ಸಚಿವರು ಕೇಂದ್ರದ ಬಜೆಟ್ ಅನ್ನು ಮಂಡಿಸಿದ್ದಾರೆ ಆದರೆ ಅರುಣ್ ಜೇಟ್ಲಿ ಅವರು ಮಾತ್ರ ಆಡಳಿತ ಪಕ್ಷದ ಸಂಪೂರ್ಣ ಬಹುಮತವನ್ನು ಪಡೆದಿದ್ದಾರೆ. ಲೋಕಸಭೆಯ 543 ಸ್ಥಾನಗಳಲ್ಲಿ 282 ರ ಹಿತಕರ ಬಹುಮತವನ್ನು ಹೊಂದಿರುವ ಬಿಜೆಪಿಯ ಮಿತ್ರರನ್ನು ಸಂತೋಷಪಡಿಸುವ ಕುರಿತು ಸಹ ಜೇಟ್ಲಿ ಅವರು ಚಿಂತಿಸುವುದಿಲ್ಲ.
 
ಮನಮೋಹನ್ ಸಿಂಗ್, ಪಿ. ಚಿದಂಬರಂ, ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್ ಮತ್ತು ಪ್ರಣಾಬ್ ಮುಖರ್ಜಿ ಅವರನ್ನು ಎಲ್ಲ ಸಮ್ಮಿಶ್ರ ರಾಜಕೀಯದ ಪ್ರಚೋದನೆಗಳು ಬಲವಂತವಾಗಿಸಿದವು. ಇದಕ್ಕೆ ವಿರುದ್ಧವಾಗಿ, ಅರುಣ್ ಜೇಟ್ಲಿ ಅವರು ಸತತ ಐದನೇ ವರ್ಷದ ಕೇಂದ್ರ ಬಜೆಟ್ ಅನ್ನು ಯಾವುದೇ ಒತ್ತಡಗಳಿಲ್ಲದೇ ಮಂಡಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments