Webdunia - Bharat's app for daily news and videos

Install App

ಕೊಡುಗೆ, ಹಿಂಜರಿತ: ಹಳಿ ತಪ್ಪಲಿದೆಯೇ ರೈಲ್ವೇ ಬಜೆಟ್?

Webdunia
ಮಂಗಳವಾರ, 30 ಜೂನ್ 2009 (19:23 IST)
ದರಕಡಿತ, ಅನಿವಾರ್ಯ ವೇತನ ಹೆಚ್ಚಳ, ಆದಾಯ ಪ್ರಗತಿಯಲ್ಲಿ ಮಂದಗತಿ ಮತ್ತು ಉಚಿತ ಕೊಡುಗೆಗಳ ಪರಿಣಾಮದಿಂದ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಲಿರುವ ಆಯವ್ಯಯ ಪತ್ರವು ಕೊರತೆ ಬಜೆಟ್ ಆಗಲಿವೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಂದಾಜುಗಳ ಪ್ರಕಾರ, ಮಾಜಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಪ್ರಕಟಿಸಿದ್ದ ದರ ಕಡಿತ ಮತ್ತು ಆರನೇ ವೇತನ ಆಯೋಗದ ಪರಿಣಾಮದಿಂದಾಗಿ ವಾರ್ಷಿಕ 17,000 ಕೋಟಿ ರೂಪಾಯಿಗಳ ವಾರ್ಷಿಕ ನಷ್ಟ ದಾಖಲಾಗಲಿದೆ.

ಇದರ ಜತೆ ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ರಿಯಾಯಿತಿ ಪಾಸ್, ಪ್ರಯಾಣಿಕರಿಗೆ ಉತ್ಕೃಷ್ಟ ಗುಣಮಟ್ಟದ ಆಹಾರ ಮತ್ತು ಇತರ ಸವಲತ್ತುಗಳನ್ನು ಟಿಕೆಟ್ ದರ ಏರಿಸದೆಯೇ ಬ್ಯಾನರ್ಜಿ ನೀಡಲು ಮುಂದಾದರೆ ಒಟ್ಟು ವಿತ್ತೀಯ ಪರಿಣಾಮ ತೀರಾ ಹೀನಾಯವೆನಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
PR

100 ರೂಪಾಯಿ ಗಳಿಸಲು ಖರ್ಚು ಮಾಡಬೇಕಿರುವ ಹಣದ ನಿರ್ವಹಣಾ ಅನುಪಾತದ ಮಿತಿಯು, ಸಚಿವಾಲಯದ ಹಣಕಾಸು ಸ್ಥಿತಿಯ ಮೇಲಿರುವ ಒತ್ತಡಗಳು ಮತ್ತು ನಿರ್ಬಂಧಗಳನ್ನು ವಿವರಿಸುತ್ತದೆ.

" ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೇಯ ನಿರ್ವಹಣಾ ಅನುಪಾತವು ಶೇಕಡಾ 88.3 ರಷ್ಟಾಗುತ್ತದೆ ಎಂದು ಮಧ್ಯಂತರ ಬಜೆಟ್ ಈಗಾಗಲೇ ಮುನ್ಸೂಚನೆ ನೀಡಿದೆ" ಎಂದು ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

" ಉಚಿತ ಪಾಸುಗಳ ಕುರಿತು ಇದೇ ಧೋರಣೆ ಮುಂದುವರಿದಲ್ಲಿ, ಪ್ರಯಾಣದರವನ್ನೂ ಹೆಚ್ಚಳ ಮಾಡದೇ ಇದ್ದಲ್ಲಿ ಈ ಪ್ರಮಾಣವು ಶೇಕಡಾ 90ನ್ನೂ ಮೀರಬಹುದಾಗಿದೆ. ಇದು ಆದಾಯದ ಮೇಲೆ ಪರಿಣಾಮ ಬೀರಲಿದೆ" ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಪ್ರಸಕ್ತ ಇರುವ 'ತತ್ಕಾಲ್' ಯೋಜನೆ ಮತ್ತು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (ಐಆರ್‌ಸಿಟಿಸಿ) ಯ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಷ್ಕರಿಸುವುದಾಗಿ ಬ್ಯಾನರ್ಜಿ ಈಗಾಗಲೇ ಹೇಳಿಕೊಂಡಿದ್ದಾರೆ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಗುಣಮಟ್ಟ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವುದಾಗಿಯೂ ತಿಳಿಸಿದ್ದಾರೆ.

" ನಮ್ಮ ಗುರಿ ಆದಾಯ ಮಾತ್ರವಲ್ಲ. ಸಾಮಾನ್ಯ ಜನರಿಗೆ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಪೂರೈಸುವ ಜವಾಬ್ದಾರಿಯೂ ಇದೆ" ಎಂದು ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ್ದ ಬ್ಯಾನರ್ಜಿ ಜವಾಬ್ದಾರಿಯುತ ಮಾತುಗಳನ್ನಾಡಿದ್ದರು.

" ಇಲ್ಲೀಗ ಪ್ರಯಾಣಿಕರಿಗೆ ನೀಡಲಾಗುತ್ತಿರುವ ವ್ಯವಸ್ಥೆಗಳು ತೀರಾ ಕೀಳು ಮಟ್ಟದ್ದಾಗಿವೆ. ಕಳಪೆ ಗುಣಮಟ್ಟದ ಆಹಾರ, ಕೊಳೆಭರಿತ ರೈಲುಗಳು ಮತ್ತು ಶೌಚಾಲಯಗಳು, ಕುಡಿಯುವ ನೀರು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಶುಚಿತ್ವದ ಕೊರತೆ ಮುಂತಾದ ಸಮಸ್ಯೆಗಳಿವೆ" ಎಂದು ಆಕೆ ಹೇಳಿದ್ದರು.

ರೈಲ್ವೇ ಸಚಿವರ ಈ ಹೇಳಿಕೆ ಹೊರತಾಗಿಯೂ ಇಲಾಖೆಯಲ್ಲಿನ ಪ್ರಸಕ್ತ ಸ್ಥಿತಿಯತ್ತ ಗಮನ ಹರಿಸುವ ರೈಲ್ವೇ ಮಂಡಳಿಯ ಸದಸ್ಯರೊಬ್ಬರು, "ಆರ್ಥಿಕ ಕುಸಿತದ ಕಾರಣ ಈ ವರ್ಷ ಸರಕು ಸಾಗಣೆಯಲ್ಲೂ ಹೆಚ್ಚಿನ ಗಳಿಕೆ ಸಾಧ್ಯವಾಗಿಲ್ಲ. ದರ ಕಡಿತವು 3,000 ಕೋಟಿ ರೂಪಾಯಿಗಳಷ್ಟು ಹೊರೆಯಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ನಾವು ಆರನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ 14,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗಿದೆ" ಎಂದಿದ್ದಾರೆ.

ಕಳೆದ ವರ್ಷ ಸರಕು ಸಾಗಣೆಯಿಂದಾಗಿ ಸರಾಸರಿ ಎಂಟಕ್ಕಿಂತಲೂ ಹೆಚ್ಚು ಗಳಿಕೆ ಸಾಧ್ಯವಾಗಿತ್ತು. ಆದರೆ ಈ ವರ್ಷದ ಆರಂಭದ ಮೂರು ತಿಂಗಳಲ್ಲೇ ಗಳಿಕೆಯು ಪ್ರತಿಶತ ಮೂರರಷ್ಟು ಕುಸಿತ ಕಂಡಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments