ಸಂಚಾರಿ ವಿಜಯ್ . ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರತಿಭೆಗೆ ಪಾತ್ರರಾದ ಅಪ್ಪಟ ಕನ್ನಡದ ಪ್ರತಿಭೆ.ನಾನು ಅವನಲ್ಲ ಅವಳು ಅನ್ನೋ ಅದ್ಭುತ ಸಿನಿಮಾದ ಮೂಲಕ ಕನ್ನಡಿಗರ ದಿಲ್ ಕದ್ದ ಸಂಚಾರಿ ವಿಜಯ್ ಇದೀಗ ಮತ್ತೆ ಸಾಮಾಜಿಕ ಕಳಕಳಿಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಂಚಾರಿ ವಿಜಯ್ ನಾನು ಅವನಲ್ಲ ಅವಳು ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಅವರಿಗೆ ಅಂತಹದ್ದೇ ಅನೇಕ ಪಾತ್ರಗಳು ಅರಸಿ ಬಂದವು. ಈ ಹಿಂದೆ ಒಗ್ಗರಣೆ ಸಿನಿಮಾದಲ್ಲೂ ವಿಜಯ್ ಇದೇ ರೀತಿಯ ಪಾತ್ರವನ್ನು ಮಾಡಿದ್ದರು.ಆದ್ರೀಗ ವಿಜಯ್ ವಿಭಿನ್ನವಾದ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಆರ್ಯ ಮೌರ್ಯ ಅನ್ನೋ ಸಾಮಾಜಕ ಕಳಕಳಿಯುಳ್ಳ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ಅಭಿನಯಿಸುತ್ತಿದ್ದಾರೆ.ಅಂದ್ಹಾಗೆ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರಿಗಾಗಿ ನಾಯಕಿಯಾಗಿ ಅಭಿನಯಿಸುತ್ತಿರೋದು ಲುಸಿಯಾ ಸಿನಿಮಾ ಖ್ಯಾತಿಯ ಶೃತಿ ಹರಿಹರನ್.
ಅಂದ್ಹಾಗೆ ಈ ಸಿನಿಮಾವನ್ನು ನವ ನಿರ್ದೇಶಕ ಜಯಪ್ರಕಾಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ.ಅಂದ್ಹಾಗೆ ಈ ಸಿನಿಮಾದಲ್ಲಿ ಶೃತಿ ಅವರದ್ದು ಪ್ರಧಾನ ಪಾತ್ರವಂತೆ. ಯಾವುದಾದರು ಹಳ್ಳಿಯೊಂದರಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ. ಸಂಚಾರಿ ವಿಜಯ್ ಹಾಗೂ ಶೃತಿ ಇಬ್ಬರೂ ಕೂಡ ಸಿನಿಮಾದ ಬಗ್ಗೆ ತುಂಬಾನೇ ಎಕ್ಸೈಟ್ ಆಗಿದ್ದಾರಂತೆ.