Webdunia - Bharat's app for daily news and videos

Install App

ಐಶ್ವರ್ಯಾ ರೈ-ಕರಣ್ ಜೋಹರ್ ನಡುವೆ ಏನು ನಡೀತಿದೆ?!

Webdunia
ಶುಕ್ರವಾರ, 24 ಮಾರ್ಚ್ 2017 (10:08 IST)
ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಸದ್ಯಕ್ಕೆ ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಆ ದುಃಖದಲ್ಲಿ ಬಾಲಿವುಡ್ ನ ಅವರ ಬಹುತೇಕ ಸ್ನೇಹಿತರು ಜತೆಯಾಗಿದ್ದರು. ಆದರೆ ಕರಣ್ ಜೋಹರ್ ಮಾತ್ರ ಬರಲಿಲ್ಲ. ಕಾರಣ?


 

ಭಾರೀ ದೋಸ್ತುಗಳಾಗಿದ್ದ ಇವರಿಬ್ಬರ ನಡುವೆ ಈಗ ಎಲ್ಲವೂ ಸರಿಯಿಲ್ಲವಂತೆ. ಅದಕ್ಕೇ ಈ ಶೀತಲ ಸಮರ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಬಚ್ಚನ್ ಕುಟುಂಬ ಐಶ್ ತಂದೆ ಕೃಷ್ಣರಾಜ್ ಸ್ಮರಣಾರ್ಥ ಕಾರ್ಯಕ್ರಮ ಏರ್ಪಡಿಸಿತ್ತು. ಇದಕ್ಕೆ ಬಾಲಿವುಡ್ ಬಹುತೇಕ ಮಂದಿ ಬಂದಿದ್ದರು. ಆದರೆ ಕರಣ್ ಮಾತ್ರ ಗೈರಾಗಿದ್ದರು.

 
ಇದಕ್ಕೆಲ್ಲಾ ಕಾರಣ ಏ ದಿಲ್ ಹೇ ಮಷ್ಕಿಲ್ ಚಿತ್ರದ ಸಂದರ್ಭದಲ್ಲಿ ಇಬ್ಬರ ನಡುವೆ ನಡೆದ ಸಂಘರ್ಷ ಎನ್ನಲಾಗುತ್ತಿದೆ. ಆ ಚಿತ್ರದಲ್ಲಿ ಕರಣ್ ಐಶ್ವರ್ಯಾರನ್ನು ಪ್ರಚಾರ ಸಂದರ್ಭದಲ್ಲಿ ಹೆಚ್ಚು ಬಳಸಿಕೊಳ್ಳದೇ ಇದ್ದಿದ್ದು, ಐಶ್ ಗೆ ಬೇಸರ ಉಂಟು ಮಾಡಿತ್ತಂತೆ. ಇದೇ ಬೇಸರದಲ್ಲಿ ಕರಣ್ ಮತ್ತೊಂದು ಚಿತ್ರದಲ್ಲಿ ಜತೆಯಾಗಿ ಮಾಡೋಣ ಬನ್ನಿ ಎಂದು ಕರೆದರೆ ಐಶ್ ನೋ ಎಂದು ಬಿಟ್ಟರಂತೆ.

 
ಅದೇ ಕಾರಣಕ್ಕೆ ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿದೆಯಂತೆ. ಇದೇ ಕಾರಣಕ್ಕೆ ಐಶ್ ದುಃಖದಲ್ಲಿದ್ದಾಗಲೂ ಕರಣ್ ಸಾಂತ್ವನ ಹೇಳುವ ಮನಸ್ಸು ಮಾಡಲಿಲ್ಲ ಎನ್ನುತ್ತಿದೆ ಬಾಲಿವುಡ್ ಗಾಸಿಪ್ ಮೂಲಗಳು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments