Webdunia - Bharat's app for daily news and videos

Install App

ತನುಶ್ರೀ ದತ್ತಾಗೆ ಬಟ್ಟೆ ಬಿಚ್ಚಿ ನರ್ತಿಸಲು ಹೇಳಿದರಂತೆ ಈ ನಿರ್ದೇಶಕ!

Webdunia
ಶುಕ್ರವಾರ, 28 ಸೆಪ್ಟಂಬರ್ 2018 (13:52 IST)
ಮುಂಬೈ: ಮೊನ್ನೆಯಷ್ಟೇ ನಾನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ತನುಶ್ರೀ ದತ್ತಾ ಈಗ ನಿರ್ದೇಶಕರ ವಿರುದ್ಧ ಹೇಳಿಕೆಯೊಂದು ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.  


ಸಂದರ್ಶನವೊಂದರಲ್ಲಿ ಮಾತನಾಡಿದ ತನುಶ್ರೀ ದತ್ತಾ, ‘ಚಾಕೋಲೇಟ್’, ‘ಡೀಪ್ ಡಾರ್ಕ್ ಸಿಕ್ರೇಟ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಆರೋಪ ಮಾಡಿದ್ದಾರೆ. ಚಾಕೋಲೇಟ್ ಸಿನಿಮಾದ ಹಾಡೊಂದರ ಶೂಟಿಂಗ್ ನಲ್ಲಿ ಬಟ್ಟೆ ಬಿಚ್ಚಿ ನೃತ್ಯ ಮಾಡುವಂತೆ ವಿವೇಕ್  ತನುಶ್ರೀಗೆ ಹೇಳಿದ್ದರಂತೆ. ತನುಶ್ರೀ ಇರ್ಫಾನ್ ಜೊತೆ ಹಾಡೊಂದನ್ನು ಶೂಟ್ ಮಾಡುತ್ತಿದ್ದರಂತೆ. ಈ ದೃಶ್ಯಕ್ಕೆ ನನ್ನ ಅಗತ್ಯವಿರಲಿಲ್ಲ. ಆದ್ರೆ ಬಟ್ಟೆ ಬಿಚ್ಚಿ ಡಾನ್ಸ್ ಮಾಡುವಂತೆ ವಿವೇಕ್ ಹೇಳಿದ್ದರು ಎಂದು ತನುಶ್ರೀ ಆರೋಪಿಸಿದ್ದಾರೆ.


ಈ ವೇಳೆ ಸುನೀಲ್ ಶೆಟ್ಟಿ ಕೂಡ ಅಲ್ಲಿದ್ದರಂತೆ. ವಿವೇಕ್  ಅಗ್ನಿಹೋತ್ರಿ ಬಟ್ಟೆ ಬಿಚ್ಚುವಂತೆ ಹೇಳಿದಾಗ ತನುಶ್ರೀ ಅದನ್ನು ವಿರೋಧಿಸಿದ್ದಳಂತೆ. ತನುಶ್ರೀಗೆ ಸುನೀಲ್ ಶೆಟ್ಟಿ ಹಾಗೂ ಇರ್ಫಾನ್ ಬೆಂಬಲ ನೀಡಿದ್ದರಂತೆ. ‘ನನಗೆ ನಟನೆ ಗೊತ್ತು, ಯಾವುದೇ ಸೂಚನೆಗಳ ಅಗತ್ಯವಿಲ್ಲ’ ಎಂದು ಇರ್ಫಾನ್  ನಿರ್ದೇಶಕರಿಗೆ ಹೇಳಿದ್ದಾರಂತೆ.


ನಟಿ ತನುಶ್ರೀ ದತ್ತಾ ಬತ್ತಳಿಕೆಯಲ್ಲಿ ಇನ್ನು ಯಾರ ಯಾರ ಹೆಸರಿದೆಯೋ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments