Select Your Language

Notifications

webdunia
webdunia
webdunia
webdunia

ಕೊನೆಗೂ ರಾಜಮೌಳಿಗೆ ಗ್ರೀನ್ ಸಿಗ್ನಲ್ ಕೊಟ್ಟರಾ ಶ್ರೀದೇವಿ?

ಕೊನೆಗೂ ರಾಜಮೌಳಿಗೆ ಗ್ರೀನ್ ಸಿಗ್ನಲ್ ಕೊಟ್ಟರಾ ಶ್ರೀದೇವಿ?
Hyderabad , ಗುರುವಾರ, 20 ಜುಲೈ 2017 (08:48 IST)
ಹೈದರಾಬಾದ್: ಬಾಹುಬಲಿ ಸಿನಿಮಾದಲ್ಲಿ ರಮ್ಯಾ ಕೃಷ್ಣ ಜಾಗದಲ್ಲಿ ಶ್ರೀದೇವಿ ನಟಿಸಲು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದರೆಂದು ಬಾಲಿವುಡ್ ನಟಿ ಶ್ರೀದೇವಿ ನಿರ್ದೇಶಕ ರಾಜಮೌಳಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಈಗ ಹಳೆಯದಾಯಿತು. ಹೊಸ ಸುದ್ದಿ ಏನಪ್ಪಾ ಎಂದರೆ, ಇವರಿಬ್ಬರೂ ಈಗ ಹೊಸ ಚಿತ್ರವೊಂದರಲ್ಲಿ ಒಂದಾಗಲಿದ್ದಾರಂತೆ!

 
ಇನ್ನೂ ಹೆಸರಿಡದ ರಾಜಮೌಳಿ ಚಿತ್ರದಲ್ಲಿ ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಶ್ರೀದೇವಿ ನಟಿಸಲು ಒಪ್ಪಿಕೊಂಡಿದ್ದಾರೆಂದು ಸುದ್ದಿ ಬಂದಿದೆ. ಶ್ರೀದೇವಿ ಜತೆಗೆ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಕೂಡಾ ಅಭಿನಯಿಸಲಿದ್ದಾರೆ ಎಂದು ಸುದ್ದಿ ಬಂದಿದೆ. ಆದರೆ ಇದು ಅಧಿಕೃತವಾಗಿಲ್ಲ.

ಆದರೆ ಈ ಮೂವರೂ ದಿಗ್ಗಜರೂ ಸೇರಿಕೊಂಡು ಹೊಸ ಚಿತ್ರ ಮಾಡಲು ತಯಾರಿ ನಡೆಸುತ್ತಿದ್ದಾರಂತೆ. ಶ್ರೀದೇವಿ ತಮ್ಮ ಹಳೆಯ ಅಸಮಾಧಾನಗಳನ್ನೆಲ್ಲಾ ಮರೆತು ರಾಜಮೌಳಿ ಜತೆ ಕೆಲಸ ಮಾಡಲು ಸಿದ್ದರಾಗಿದ್ದಾರಂತೆ ಎಂಬ ಅಂತೆ ಕಂತೆಗಳು ಹರಿದಾಡುತ್ತಿದೆ. ಸತ್ಯ ಇವರ ಬಾಯಿಂದಲೇ ಹೊರಬರಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನಸು ಮಾಡಿದರೆ ನಾನೇ ಮುಖ್ಯಮಂತ್ರಿ; ಕಮಲ್ ಹಾಸನ್