ರಾಜಕಾರಿಣಿಗಳು ದೇಶದ ಸಾಮಾಜಿಕ ಸಮಸ್ಯೆಗಳ ಆಧಾರಿತ ಚಿತ್ರಗಳನ್ನು ನೋಡಲಿ ಎಂದು ಹೇಳಿದ್ದಾರೆ. ಕೆಲ ಚಿತ್ರಗಳು ಸಾಮಾಜಿಕ ಸಮಸ್ಯೆಗಳಾಧರಿತ ಚಿತ್ರಗಳಾಗಿರುತ್ತವೆ. ಆದ್ದರಿಂದ ರಾಜಕಾರಿಣಿಗಳು ಇಂಥ ಸಿನಿಮಾವನ್ನಾದ್ರು ವೀಕ್ಷಿಸಬೇಕು ಎಂಡು ಅಭಿಪ್ರಾಯಪಟ್ಟಿದ್ದಾರೆ.
ಮರಾಠಾವಾಡ ಚಿತ್ರದಲ್ಲಿ ನಟ ಓಂ ಪುರಿ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತು.. ಮರಾಠಾವಾಡ ಚಿತ್ರವು ರೈತರ ಸಮಸ್ಯೆಗಳ ಆಧಾರಿತ ಚಿತ್ರವಂತೆ.ಈ ಚಿತ್ರದಲ್ಲಿ ರೈತರ ಆತ್ಮಹತ್ಯೆ ಕುರಿತಂತೆ ಬಿಂಬಿಸಲಾಗಿದೆ.
ದೇಶದಲ್ಲಿ ರೈತರು ಸಾವನ್ನಪ್ಪುತ್ತಿರುವುದು ಒಂದು ಗಂಭೀರ ಸಮಸ್ಯೆ.. ರೈತರು ಸಾವನ್ನಪ್ಪುತ್ತಿರುವುದಕ್ಕೆ ಮೂಲ ಕಾರಣ ತಾವು ಬೆಳೆದ ಸೂಕ್ತ
ಬೆಲೆ ಸಿಗದೆ ಇರುವುದು. ರೈತರ ಸಮಸ್ಯೆಗಳನ್ನು ಮಾರಾಠಾವಾಡದಲ್ಲಿ ಚಿತ್ರೀಸಲಾಗಿದೆ ಎಂದು ಈ ವೇಳೆಲಿ ಉಲ್ಲೇಖಿಸಿದರು.
ಇನ್ನೂ ಓಂ ಪುರಿ ನಿನ್ನೆ ರಾಹುಲ್ ಗಾಂಧಿಯನ್ನು ಅಧ್ಯಕ್ಷ ಸ್ಥಾನಕ್ಕೆ ಮಾಡುವುದರ ಬಗ್ಗೆ ಸೋನಿಯಾ ಕನಸು ಕಾಣುತ್ತಿದ್ದಾರೆ, ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಅವರನ್ನು ಪ್ರಧಾನಿ ಮಾಡುವ ಯೋಚನೆಯಲ್ಲಿದ್ದಾರೆ, ಆದ್ರೆ ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತವೇ..? ರಾಹುಲ್ ವಯಸ್ಸು ಹಾಗೂ ಅನುಭವ ನೋಡಿ.. ನಾವೇನು ಮೂರ್ಖರಾ? ಎಂದು ನಟ ಓಂ ಪುರಿ ಟೀಕೆ ಮಾಡಿದ್ದರು.
ಕೇಸರಿ ಪಕ್ಷ ಹೊರೆತುಪಡಿಸಿದರೆ ನಮಗೆ ಬೇರೆ ಆಯ್ಕೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ಸೇರುವ ಬಗ್ಗೆ ಮೂನ್ಸುಚನೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ