Select Your Language

Notifications

webdunia
webdunia
webdunia
webdunia

ಪ್ರಶಸ್ತಿ ಸಮಾರಂಭಗಳಿಗೆ ಕಳೆ ಇಲ್ಲ ಎಂದ ಅರ್ಜುನ್ ರಾಂಪಾಲ್

ಪ್ರಶಸ್ತಿ ಸಮಾರಂಭಗಳಿಗೆ ಕಳೆ ಇಲ್ಲ ಎಂದ ಅರ್ಜುನ್ ರಾಂಪಾಲ್
Mumbai , ಶನಿವಾರ, 5 ನವೆಂಬರ್ 2016 (09:30 IST)
ಮುಂಬೈ: ಜಗಮಗಿಸುವ ವೇದಿಕೆಗಳಲ್ಲಿ ನಡೆಯುವ ಪ್ರಶಸ್ತಿ ಸಮಾರಂಭಗಳು ಮೊದಲಿನಷ್ಟು ಆಕರ್ಷಣೀಯವಾಗಿಲ್ಲ ಎಂದು ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಹೇಳಿದ್ದಾರೆ.

“ರಾಷ್ಟ್ರ ಪ್ರಶಸ್ತಿ ಎನ್ನುವುದು ನನ್ನ ಹೃದಯಕ್ಕೆ ಹತ್ತಿರವಾದುದು. ನನಗೆ ಗೊತ್ತು ಈ ಬಾರಿ ರಾಷ್ಟ್ರ ಪ್ರಶಸ್ತಿ ನಾನು ಗೆಲ್ಲುತ್ತೆನೆಂದು ನನ್ನ ಮೇಲೆ ನಿರೀಕ್ಷೆಗಳಿವೆ. ಆದರೆ ನಾನು ಒತ್ತಡದಲ್ಲಿಲ್ಲ. ಬೇರೆ ಕೆಲವು ಪ್ರಶಸ್ತಿ ಸಮಾರಂಭಗಳಿಗೆ ಈಗ ಮೊದಲಿನ ಕಳೆಯೇ ಇಲ್ಲ” ಎಂದು ಅರ್ಜುನ್ ಸುದ್ದಿಗಾರರಿಗೆ ಹೇಳಿದ್ದಾರೆ.

2008 ರಲ್ಲಿ ಅವರು ರಾಕ್ ಆನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈಗ ಮತ್ತೆ ಅದರ ಎರಡನೇ ಭಾಗದಲ್ಲೂ ಅರ್ಜುನ್ ನಟಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯೂ ಅದೇ ರೀತಿ ಪ್ರಶಸ್ತಿ ಗೆಲ್ಲುವಂತಹ ಪ್ರದರ್ಶನ ಅವರಿಂದ ಬರಬಹುದೇ ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್, ನಾಗಾರ್ಜುನ್ ಜತೆಗಿರುವುದೇ ಗೌರವ: ಅಮಿತಾಭ್ ಬಚ್ಚನ್