Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಿಖಿಲ್...

ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಿಖಿಲ್...
ಬೆಂಗಳೂರು , ಗುರುವಾರ, 20 ಜುಲೈ 2017 (14:44 IST)
ಬೆಂಗಳೂರು:ಜಾಗ್ವಾರ್ ಚಿತ್ರದ ಬಳಿಕ ನಿಖಿಲ್ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.  ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಕುರು ಕ್ಷೇತ್ರ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆ.
 
ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರಕ್ಕೆ ಈಗ ನಿಖಿಲ್ ಸೇರ್ಪಡೆಯಾಗಿದ್ದು, ಕುರುಕ್ಷೇತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಇನ್ನು ಅಭಿಮನ್ಯುವಾಗಿ ನಿಖಿಲ್ ಹೇಗೆ ಕಾಣಲಿದ್ದಾರೆ ಎಂಬುದು ಟೆಸ್ಟ್ ಶೂಟ್ ನಲ್ಲಿ ತಿಳಿಯಲಿದೆ.
 
ಈ ಚಿತ್ರದಲ್ಲಿ ದರ್ಶನ್‌ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರೀಕೃಷ್ಣನಾಗಿ ರವಿಚಂದ್ರನ್‌ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹರಿಪ್ರಿಯಾ, ರೆಜಿನಾ ಕಸಾಂಡ್ರಾ, ಸ್ನೇಹ, ಶ್ರೀನಾಥ್‌, ಜಿ.ಕೆ. ಶ್ರೀನಿವಾಸಮೂರ್ತಿ ಹೀಗೆ ದೊಡ್ಡ ತಾರಾಬಳಗವೇ ಕುರುಕ್ಷೇತ್ರದಲ್ಲಿದೆ. ಚಿತ್ರದ ಮುಹೂರ್ತ ಈ ತಿಂಗಳ ಕೊನೆಗೆ ನಿಗದಿಯಾಗಿದ್ದು, ಹೊಸವರ್ಷಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೂನಾ ಅಬ್ದುಲ್ಲಾ ಸೆಕ್ಸಿ ಲುಕ್: ಸೋ ಹಾಟ್..!