ತಮ್ಮ ತಮ್ಮ ಇಷ್ಟದ ನಟರ ಬಗ್ಗೆ ಹಲವು ಅಭಿಮಾನಿಗಳು ಕ್ರೇಜ್ ಬೆಳೆಸಿಕೊಂಡಿರುತ್ತಾರೆ. ನಟರನ್ನು ಆರಾಧಿಸುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅವರಂತೆ ಫಾಲೋ ಕೂಡ ಮಾಡುತ್ತಾರೆ. ಆದ್ರೆ ಇಲ್ಲಿ ಇಬ್ಬರು ಅಭಿಮಾನಿಗಳು ನಟರ ವಿಚಾರವಾಗಿ ಜಗಳವಾಡಿ. ಕಡೆಗೆ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.
ಯೆಸ್, ದಕ್ಷಿಣ ಭಾರತದ ನಾಯಕರಾದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಜೂನಿಯರ್ ಎನ್ಟಿಆರ್ ನಟರ ಬಗ್ಗೆ ಇಬ್ಬರು ಹೆಚ್ಚು -ಕಡಿಮೆ ಜಗಳವಾಡಿದ್ದಾರೆ. ಇಬ್ಬರ ನಟರ ಬಗ್ಗೆ ಯಾರು ಹೆಚ್ಚು -ಕಡಿಮೆ ಎಂದು ಚರ್ಚೆ ನಡೆದಿತ್ತು. ಈ ವೇಳೆ ಇಬ್ಬರ ಜಗಳ ಮುಂದುವರಿದಿದೆ.
ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಹೆಚ್ಚಾಗಿದೆ. ಜಗಳ ಹೆಚ್ಚಾದ ಪರಿಣಾಮ ಒಬ್ಬ ಅಭಿಮಾನಿ ಮತ್ತೊಬ್ಬ ಅಭಿಮಾನಿಯೊಬ್ಬನನ್ನು ಹತ್ಯೆ ಮಾಡಿದ್ದಾನೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟರ ಬಗ್ಗೆ ಹುಚ್ಚರಾಗೋ ಅಭಿಮಾನಿಗಳು ಹೆಚ್ಚಾಗಿರುತ್ತಾರೆ. ನಟನಿಗಾಗಿ ದೇವಾಲಯ ಸ್ಥಾಪನೆ ಮಾಡಿ ಅಲ್ಲಿ ಪೂಜೆ ಮಾಡಿ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುತ್ತಾರೆ.