ಪಾಕಿಸ್ತಾನ ಕುರಿತಂತೆ ನಟಿ, ಮಾಜಿ ಸಂಸದೆ ರಮ್ಯಾ ನೀಡಿದ್ದ ಹೇಳಿಕೆ ವಿರುದ್ಧ ಸೋಮವಾರಪೇಟೆ ಜೆಎಂಎಫ್ಸಿ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಅಗಸ್ಟ್ 27ಕ್ಕೆ ವಿಚಾರಣೆ ನಡೆಸಲಿದೆ.
ರಮ್ಯಾ ವಿರುದ್ಧ ಕೊಡಗು ಪ್ರಗತಿ ರಂಗದ ಜಿಲ್ಲಾಧ್ಯಕ್ಷ, ವಕೀಲ ವಿಠಲ ಗೌಡ ಅವರು ಜೆಎಂಎಫ್ಸಿ ಕೋರ್ಟ್ನಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದಾರೆ.
ಪಾಕಿಸ್ತಾನ ನರಕವಲ್ಲ, ಅಲ್ಲಿಯೂ ಒಳ್ಳೆಯ ಜನರು ಇದ್ದಾರೆ. ಪಾಕ್ ಜನರು ತುಂಬಾ ಒಳ್ಳೆಯವರು ಎಂದು ಹೇಳುವುದರ ಮೂಲಕ ರಮ್ಯಾ ವಿವಾದದ ಹೇಳಿಕೆ ನೀಡಿದ್ದರು.
'ಪ್ರಧಾನಿ ನರೇಂದ್ರ ಮೋದಿಯವರನ್ನು ದ್ವೇಷಿಸುತ್ತೀರಾ' ಎಂದ ಮಾತ್ರಕ್ಕೆ ಪಾಕಿಸ್ತಾನವನ್ನು ಸಪೋರ್ಟ್ ಮಾಡುವುದು ಎಷ್ಟು ಸರಿ ಎಂದು ಶ್ರೀರಾಜ್ ಭಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ.. 'ನಾನು ನರೇಂದ್ರ ಮೋದಿಯವರನ್ನು ದ್ವೇಷಿಸುವುದಿಲ್ಲ. ಕೆಲ ವಿಚಾರಗಳಲ್ಲಿ ನಮ್ಮ ಯೋಚನೆ ಭಿನ್ನ. ಪಾಕಿಸ್ತಾನ ನಮ್ಮನ್ನು ಚೆನ್ನಾಗಿ ನೋಡಿಕೊಳ್ತು'. ಹಾಗಾಗಿ ಅದನ್ನೇ ಹೇಳಿದೆ ಅಷ್ಟೇ ಎಂದು ನಿನ್ನೆ ಟ್ವಿಟರ್ನಲ್ಲಿ ರಮ್ಯಾ ಸ್ಪಷ್ಟನೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ