Select Your Language

Notifications

webdunia
webdunia
webdunia
webdunia

ಕಾವೇರಿ ಹೋರಾಟದಲ್ಲಿ ತಾರಾ ಬಳಗ

ಕಾವೇರಿ ಹೋರಾಟದಲ್ಲಿ ತಾರಾ ಬಳಗ
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2016 (10:33 IST)
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಇಡೀ ತಾರಾ ಬಳಗವೇ ಕಾವೇರಿ ಹೋರಾಟ ದಲ್ಲಿ ಭಾಗಿಯಾಗಿದೆ. ರಸ್ತೆಗಿಳಿದು ಪ್ರತಿಭಟನೆ ಮಾಡಲು ಚಿತ್ರರಂಗ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದು, ರೈತರು, ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿವೆ. 

 
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಇಡೀ ತಾರಾ ಬಳಿಕವೇ ಹೋರಾಟದಲ್ಲಿ ಭಾಗಿಯಾಗಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಕರ್ನಾಟಕ್ ಬಂದ್‌ಗೆ ಚಿತ್ರರಂಗವೇ ಸಾಥ್ ನೀಡಿದೆ.ಇ

ನ್ನೂ ಮಂಡ್ಯದಲ್ಲಿ  ಕಾವೇರಿ ಹೋರಾಟ ತೀವ್ರಗೊಂಡಿದ್ದು, ಹೋರಾಟದಲ್ಲಿ ರೈತರು, ಸಂಘಟನೆಗಳು ಭಾಗಿಯಾಗಿವೆ. ನಿರ್ದೇಶಕ ನಟ ಉಪ್ಪಿ , ದೇವರಾಜ್ , ಪ್ರಜ್ವಲ್ ದೇವರಾಜ್, ನಟ -ನಟಿಯರು, ನಿರ್ದೇಶಕರು ಭಾಗಿಯಾಗಿದ್ದಾರೆ.
 
ನಾನು ಹುಟ್ಟಿದಾಗಿನಿಂದ ಈ ಸಮಸ್ಯೆ ಇದೆ, ಬಹುಶಃ ಸಾಯುವರೆಗೂ ಇರಬಹುದು ಇದೇ ವೇಳೆ ನಟ ಉಪ್ಪಿ ತಿಳಿಸಿದ್ದಾರೆ.. ಇನ್ನೂ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಲು ಸ್ಯಾಂಡಲ್‌ವುಡ್ ಗಣ್ಯರು ನಿರ್ಧಾರ ಕೈಗೊಂಡಿದ್ದಾರೆ.ಈ ಕುರಿತು ಸಿದ್ಧತೆ ನಡೆಯುತ್ತಿದ್ದಾರೆ. ರಾಜ್ಯಪಾಲರಿಗೆ ಭೇಟಿಯಾಗಿ ಚಿತ್ರರಂಗ ಮನವಿ ಸಲ್ಲಿಸಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಬಿಗ್ ಬಾಸ್ 4 ಪ್ರೋಮೋ ಬಿಡುಗಡೆ