Select Your Language

Notifications

webdunia
webdunia
webdunia
webdunia

ಪೊಲೀಸ್ ಮೊರೆ ಹೋದ ಕರಣ್ ಜೋಹರ್

ಪೊಲೀಸ್ ಮೊರೆ ಹೋದ ಕರಣ್ ಜೋಹರ್
Mumbai , ಬುಧವಾರ, 19 ಅಕ್ಟೋಬರ್ 2016 (09:30 IST)
ಮುಂಬೈ: ಅಕ್ಟೋಬರ್ 28ಕ್ಕೆ ಬಿಡುಗಡೆಯಾಗಬೇಕಿದ್ದ ತಮ್ಮ ಚಿತ್ರ “ಏ ದಿಲ್ ಹೇ ಮುಷ್ಕಿಲ್’ ಬಗ್ಗೆ ಕರಣ್ ಜೋಹರ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.

ಒಂದು ಕಡೆ ಭಾರತೀಯ ಸಿನಿಮಾ ಮಾಲಿಕರ ಪ್ರದರ್ಶಕರ ಸಂಘದ ನಿಷೇಧ ಇನ್ನೊಂದೆಡೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಬೆದರಿಕೆ. ಅಂತೂ ಪಾಕಿಸ್ತಾನ ಕಲಾವಿದನನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದಕ್ಕೆ ಕರಣ್ ಜೋಹರ್ ತಲೆಕೆಡಿಸಿಕೊಳ್ಳುವಂತಾಗಿದೆ.

ಹೀಗಾಗಿ ಅವರು ರಕ್ಷಣೆ ನೀಡುವಂತೆ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ವೇಳೆ ಅವರ ಜತೆ ನಿರ್ದೇಶಕ ಮಹೇಶ್ ಭಟ್ ಕೂಡಾ ಇದ್ದರು.

ಕರುಣೆ ತೋರಿ ಎಂದ ಕರಣ್:  ತಮ್ಮನಿರ್ಮಾಣದ ಚಿತ್ರ “ಏ ದಿಲ್ ಹೇ ಮುಷ್ಕಿಲ್” ಬಿಡುಗಡೆಗೆ ಯಾವುದೇ ತೊಂದರೆ ಮಾಡಬೇಡಿ ಎಂದು ಸಾರ್ವಜನಿಕವಾಗಿ ಕರಣ್ ಜೋಹರ್ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಪಾಕ್ ಕಲಾವಿದರನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುವುದಿಲ್ಲ. ಇದೊಂದು ಬಾರಿ ತಮ್ಮ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಿ ಎಂದು ಅವರು ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ದುನಿಯಾ ಜತೆ ರಮೇಶ್ ಅರವಿಂದ್